CrimeDistricts

ಸುಂದರಿ ಹೆಂಡತಿ ಮೇಲೆ ಅನುಮಾನ; ಕೊಂದೇಬಿಟ್ಟ ಪಾಪಿ!

ರಾಮನಗರ; ದೇವರ ಪೂಜೆಗೆಂದು ಬೆಟಕ್ಕೆ ಕರೆದೊಯ್ದು, ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.. 32 ವರ್ಷದ ದಿವ್ಯಾ ಎಂಬಾಕೆಯೇ ಕೊಲೆಯಾದ ಮಹಿಳೆಯಾಗಿದ್ದಾಳೆ.. ರಾಮನಗರ ತಾಲ್ಲೂಕು ಹೂಜಗಲ್ಲು ಬೆಟ್ಟದಲ್ಲಿ ಈ ಕೃತ್ಯ ಎಸಗಲಾಗಿದೆ..

ಇದನ್ನೂ ಓದಿ; ಮಲಗೋಣ ಬಾ ಎಂದು ಕರೆದರಂತೆ ಪೊಲೀಸ್‌ ಇನ್ಸ್‌ಪೆಕ್ಟರ್‌

ಪತಿ ಉಮೇಶ್‌ ಎಂಬಾತನೇ ದಿವ್ಯಾಳನ್ನು ಕೊಲೆ ಮಾಡಿರುವಾತ.. ದಿವ್ಯಾಳನ್ನು ಕೊಲೆ ಮಾಡಿ ನಂತರ ಚೀಲೂರು ಅರಣ್ಯದಲ್ಲಿ ಶವ ಎಸೆದು ಪರಾರಿಯಾಗಿದ್ದಾನೆ.. ದಿವ್ಯಾ ಸುಂದರಿಯಾಗಿದ್ದಳು.. ಆಕೆಯ ಶೀಲದ ಬಗ್ಗೆ ಉಮೇಶ್‌ ಯಾವಾಗಲೂ ಅನುಮಾನಪಡುತ್ತಿದ್ದ.. ಇದೇ ವಿಚಾರ ಮುಂದಿಟ್ಟುಕೊಂಡು ಆತ ದಿವ್ಯಾಗೆ ಸದಾ ಕಿರುಕುಳ ನೀಡುತ್ತಿದ್ದ.. ಹೀಗಾಗಿ ದಿವ್ಯಾ ಡಿವೋರ್ಸ್‌ ಪಡೆಯಲು ಮುಂದಾಗಿದ್ದರು,, ಇಬ್ಬರೂ ನಿಮ್ಮೆ ಮಾಗಡಿ ಕೋರ್ಟ್‌ಗೆ ಹಾಜರಾಗಿದ್ದರು..

ಇದನ್ನೂ ಓದಿ; ಕಾರ್ಮಿಕನ ಬೆತ್ತಲೆ ಮಾಡಿ ಥಳಿಸಿದ ಹಾಸಿಗೆ ವ್ಯಾಪಾರಿ!

ಕೋರ್ಟ್‌ ಇಯರಿಂಗ್‌ ಮುಗಿದ ನಂತರ ದೇವಸ್ಥಾನಕ್ಕೆ ಹೋಗೋಣವೆಂದು ನಾಟಕವಾಡಿ ಆಕೆಯನ್ನು ಬೆಟ್ಟಕ್ಕೆ ಕರೆದುಕೊಂಡು ಹೋಗಿ ಈ ಕೃತ್ಯ ಎಸಗಿದ್ದಾನೆ.. ಉಮೇಶ್‌ಗೆ ಮತ್ತೊಬ್ಬ ವ್ಯಕ್ತಿ ಸಹಾಯ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.. ಇಬ್ಬರೂ ಪರಾರಿಯಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ..

Share Post