CrimeDistricts

ಆಸ್ತಿಗಾಗಿ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿದ ಮಗ!

ತುಮಕೂರು; ಪಾಪಿ ಮಗನೊಬ್ಬ ಹೆತ್ತ ತಂದೆಯನ್ನೇ ದಾರುಣವಾಗಿ ಕೊಲೆ ಮಾಡಿದ್ದಾನೆ.. ತುಮಕೂರು ಜಿಲ್ಲೆ ಕೊರಟಗೆರೆ ಬಳಿಯ ಆಲಪನಹಳ್ಳಿಯ ವೆಂಕಟಪ್ಪ ಎಂಬುವವರೇ ಕೊಲೆಯಾದವರು.. ಆಸ್ತಿ ವಿಚಾರಕ್ಕೆ ಜಗಳ ತೆಗೆದಿರುವ ಮಗ ಸಿದ್ದಪ್ಪ ಮಚ್ಚಿನಿಂದ ಕೊಚ್ಚಿ ತಂದೆಯನ್ನು ಕೊಲೆ ಮಾಡಿದ್ದಾನೆ.. ಕೊಲೆ ಮಾಡಿದ ನಂತರ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ..

ಇದನ್ನೂ ಓದಿ; ಮೊಬೈಲ್‌ ಬದಲು ವಾಟರ್‌ ಹೀಟರ್‌ ಕಾಯಲ್‌ ಕಿವಿಗಿಟ್ಟುಕೊಂಡು ಸಾವು!

ಕೊಲೆಯಾದ ವೆಂಕಟಪ್ಪ ಅವರು ಮೂರೂವರೆ ಎಕರೆ ಜಮೀನು ಹೊಂದಿದ್ದು, ಅದರಲ್ಲಿ ಒಂದಷ್ಟು ಜಮೀನನ್ನು ಮಾರಾಟ ಮಾಡಿದ್ದರು.. ಅದರಲ್ಲಿ ಬಂದ ಹಣದಲ್ಲಿ 25 ಲಕ್ಷ ರೂಪಾಯಿಯನ್ನು ಮಗಳಿಗೆ ಕೊಟ್ಟಿದ್ದರು.. ಉಳಿದ ಜಮೀನನ್ನು ಕೂಡಾ ಮಗಳ ಹೆಸರಿಗೇ ಬರೆದುಕೊಟ್ಟಿದ್ದರು.. ಇದೇ ವಿಚಾರಕ್ಕೆ ಮಗ ಸಿದ್ದಪ್ಪ ತನ್ನ ತಂದೆ ವೆಂಕಟಪ್ಪ ಜೊತೆ ಕ್ಯಾತೆ ತೆಗೆದಿದ್ದಾನೆ.. ಜಗಳ ತಾರಕಕ್ಕೇರಿದಾಗ ಮಚ್ಚಿನಿಂದ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿದ್ದಾನೆ..
ಸ್ಥಳಕ್ಕೆ ಎಎಸ್‌ಪು ಮರಿಯಪ್ಪ ಹಾಗೂ ಕೊಳಾಲ ಠಾಣೆ ಪೊಲೀಸರು ಭೇಟಿ ನೀಡಿದ ಪರಿಶೀಲನೆ ನಡೆಸಿದ್ದಾರೆ. ನಾಪತ್ತೆಯಾಗಿರುವ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ..

ಇದನ್ನೂ ಓದಿ; 3 ವರ್ಷದಲ್ಲಿ 5 ಮದುವೆಯಾದ ಹುಬ್ಬಳ್ಳಿಯ ಹೆಣ್ಣು!

Share Post