Cinema

ಅಪ್ಪು ಮನೆಗೆ ಅಲ್ಲು ಅರ್ಜುನ್‌ ಯಾಕೆ ಹೋಗಿಲ್ಲ ಗೊತ್ತಾ?

ಬೆಂಗಳೂರು: ಟಾಲಿವುಡ್‌ ನಟ ಅಲ್ಲು ಅರ್ಜುನ್‌ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಈಗ ಅವರು ಚಿತ್ರವೊಂದರ ಪ್ರಮೋಷನ್‌ ನಲ್ಲಿ ತೊಡಗಿದ್ದಾರೆ. ಅದೇ ರೀತಿ ನಿನ್ನೆ ಪುಷ್ಪ ಚಿತ್ರದ ಕರ್ನಾಟಕಕ್ಕೆ ಭೇಟಿ ನೀಡಿ ಸಾಕಷ್ಟು ಮಾತುಕತೆ ನಡೆಸಿದ್ದಾರೆ. ಅಲ್ಲು ಅರ್ಜುನ್ ಹಾಗೂ ಪುನೀತ್ ರಾಜ್‌ಕುಮಾರ್ ಆತ್ಮೀಯರು. ಆದರೆ ಪುನೀತ್ ನಿಧನರಾದ ಬಳಿಕ ಅಲ್ಲು ಅರ್ಜುನ್ ಅಂತಿಮ ದರ್ಶನಕ್ಕಾಗಲಿ, ಅಪ್ಪು ನಿವಾಸಕ್ಕಾಗಿ ಆಗಮಿಸಿರಲಿಲ್ಲ. ಮೆಗಾಸ್ಟಾರ್ ಚಿರಂಜೀವಿ ಅಂತಿಮ ದರ್ಶನಕ್ಕೆ ಬಂದಿದ್ದರು, ರಾಮ್ ಚರಣ್ ತೇಜ ಅಪ್ಪು ನಿವಾಸಕ್ಕೆ ಆಗಮಿಸಿ ಸಾಂತ್ವನ ಹೇಳಿದರು. ಆದರೆ ಅಲ್ಲು ಅರ್ಜುನ್ ಮಾತ್ರ ಪುನೀತ್ ನಿವಾಸಕ್ಕೆ ಬಂದಿರಲಿಲ್ಲ.ಇದೀಗ ಅದು ತೀವ್ರ ಕೂತುಹಲ ಮೂಡಿಸಿದೆ. ಈ ಕುರಿತು ಮಾತನಾಡಿದ ಅವರು, ತಾವು ಬೆಂಗಳೂರಿಗೆ ಬಂದಿದ್ದರೂ ಸಹ ಇಂದು ಅಪ್ಪು ನಿವಾಸಕ್ಕೆ ಭೇಟಿ ನೀಡುವುದಿಲ್ಲ ಎಂದು ಹೇಳಿದರು. ಅದಕ್ಕೆ ಕಾರಣವನ್ನೂ ನೀಡಿದರು. ಅಲ್ಲು ಅರ್ಜುನ್ ನೀಡಿದ ಕಾರಣಕ್ಕೆ ಮೆಚ್ಚುಗೆಗೆ ಕಾರಣವಾಯಿತು.ಪುಷ್ಪ’ ಸಿನಿಮಾದ ಕಾರ್ಯಕ್ರಮಗಳ ಒತ್ತಡದ ನಡುವೆ ನಾನು ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನಕ್ಕಾಗಲಿ, ಅವರ ನಿವಾಸಕ್ಕಾಗಲಿ ಬರಲಾಗಲಿಲ್ಲ. ಅವರ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಲು ಸಾಧ್ಯವಾಗಲಿಲ್ಲ. ಆದರೆ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು .

Share Post