BengaluruCrime

ಮೊಬೈಲ್‌ ಚಾರ್ಜ್‌ ಮಾಡುವಾಗ ಕರೆಂಟ್‌ ಶಾಕ್‌; ವಿದ್ಯಾರ್ಥಿ ಸಾವು!

ಬೆಂಗಳೂರು; ಪಿಜಿಯಲ್ಲಿ ಮೊಬೈಲ್‌ ಚಾರ್ಜ್‌ಗೆ ಹಾಕಿದ್ದಾಗ ಶಾಕ್‌ ಹೊಡೆದು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ.. ಬೆಂಗಳೂರಿನ ಮಂಜುನಾಥ್ ನಗರದ‌ ವರ್ಷಿಣಿ ಜೆಂಟ್ಸ್​ ಪಿಜಿಯಲ್ಲಿ ಈ ದುರ್ಘಟನೆ ನಡೆದಿದೆ.. ಬೀದರ್ ಮೂಲದ ಶ್ರೀನಿವಾಸ್ (24)  ಎಂಬ ವಿದ್ಯಾರ್ಥಿಯೇ ಸಾವನ್ನಪ್ಪಿದಾತ..

ಶ್ರೀನಿವಾಸ್‌ ಸಾಫ್ಟ್‌ವೇರ್‌ ಕೋರ್ಸ್‌ ಮಾಡಲೆಂದು ಬೆಂಗಳೂರಿಗೆ ಬಂದಿದ್ದ.. ಮಂಜುನಾಥ್ ನಗರದ‌ ಪಿಜಿಯಲ್ಲಿದ್ದ ಶ್ರೀನಿವಾಸ್‌, ರಾತ್ರಿ ಮೊಬೈಲ್‌ ಚಾರ್ಜ್‌ಗೆ ಹಾಕಿದ್ದು, ಈ ವೇಳೆ ವಿದ್ಯುತ್‌ ಸ್ಪರ್ಶವಾಗಿದೆ.. ಮೊಬೈಲ್ ಚಾರ್ಜಿಂಗ್ ವೈರ್ ಡ್ಯಾಮೇಜ್ ಆಗಿದ್ದರಿಂದ ಈ ಘಟನೆ ನಡೆದಿದ್ದು, ಶ್ರೀನಿವಾಸ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ..

ರಾತ್ರಿ ಊಟದ ಸಮಯದಲ್ಲಿ ಊಟಕ್ಕೆ ಬಾ ಎಂದು ಪಕ್ಕದ ಬೆಡ್ ಯುವಕ ಕರೆದಾಗ ಶ್ರೀನಿವಾಸ್‌ ಸಾವನ್ನಪ್ಪಿರುವುದು ಗೊತ್ತಾಗಿದೆ..

 

Share Post