CrimeNational

ಗುಂಡು ಹಾರಿಸಿ ಕ್ರೈಂ ಬ್ರಾಂಚ್‌ ಪೊಲೀಸ್‌ ಅಧಿಕಾರಿಯ ಬರ್ಬರ ಹತ್ಯೆ!

ಕರ್ನಾಲ್‌; ಕ್ರೈಮ್‌ ಬ್ರಾಂಚ್‌ ಪೊಲೀಸ್‌ ಅಧಿಕಾರಿ ಮೇಲೆ ಗುಂಡು ಹಾರಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಹರಿಯಾಣದ ಕರ್ನಾಲ್​​ನಲ್ಲಿ ನಡೆದಿದೆ..ಯಮುನಾನಗರದ ಕ್ರೈಂಬ್ರಾಂಚ್​ ಎಎಸ್​ಐ ಸಂಜೀವ್ ಕುಮಾರ್ ಎಂಬುವವರೇ ದುಷ್ಕರ್ಮಿಗಳಿಂದ ಕೊಲೆಯಾದ ಅಧಿಕಾರಿಯಾಗಿದ್ದಾರೆ.. ಅವರು ಬೆಳಗ್ಗೆ ಮನೆ ಬಳಿ ವಾಕಿಂಗ್‌ ಮಾಡುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ..

ಸಂಜೀವ್‌ ಕುಮಾರ್‌ ಅವರ ಹಣಣೆ ಹಾಗೂ ಸೊಂಟದ ಭಾಗಕ್ಕೆ ಗುಂಡುಗಳು ಹೊಕ್ಕಿದ್ದು, ಇದರಿಂದ ತೀವ್ರ ರಕ್ತಸ್ರಾವವಾಗಿದೆ.. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.. ಸ್ಥಳದಲ್ಲಿ ಕೆಲವು ಬುಲೆಟ್‌ಗಳು ಸಿಕ್ಕಿವೆ.. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ..

 

Share Post