BengaluruCinemaCrime

ಪೊಲೀಸರ ಬಳಿ ಇವೆ ರಾಶಿ ರಾಶಿ ಸಾಕ್ಷ್ಯಗಳು..!; ರೇಣುಕಾಸ್ವಾಮಿ ಕೊಲೆ ಆರೋಪಿಗಳಿಗೆ ತಪ್ಪಿಸಿಕೊಳ್ಳೋಕೆ ಸಾಧ್ಯವೇ ಇಲ್ಲ!

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಯಾರೂ ಕೂಡಾ ಅಷ್ಟು ಸುಲಭವಾಗಿ ತಪ್ಪಿಸಿಕೊಳ್ಳೋದಕ್ಕೆ ಸಾಧ್ಯವಿಲ್ಲ.. ಯಾಕಂದ್ರೆ ಪೊಲೀಸರಿಗೆ ಹಲವಾರು ಮಹತ್ವದ ಸಾಕ್ಷ್ಯಗಳು ಸಿಕ್ಕಿವೆ.. ನಟ ದರ್ಶನ್‌ ಸೇರಿ ಎಲ್ಲಾ ಆರೋಪಿಗಳ ಬಗ್ಗೆ ಪೊಲೀಸರು ಸಾಕ್ಷ್ಯಗಳು ಸಂಗ್ರಹ ಮಾಡಿದ್ದಾರೆ.. ರಾಶಿ ರಾಶಿ ಸಾಕ್ಷ್ಯಗಳು ಸಿಕ್ಕಿದ್ದು, ಕಾನೂನು ಕಂಟಕದಿಂದ ಆರೋಪಿಗಳು ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಎಂದು ಹೇಳಲಾಗುತ್ತಿದೆ..

ಹಾಗಾದರೆ ಪೊಲೀಸರ ಬಳಿ ಇರುವ ಸಾಕ್ಷ್ಯಗಳು ಏನು..? ಎಂಬುದನ್ನು ನೋಡೋಣ.. ಪೊಲೀಸರು ಘಟನೆ ನಡೆದ ಸ್ಥಳದಲ್ಲಿ ಹಲವಾರು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.. ಕೊಲೆಯಾದ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಲು ಬಳಸಿದ ಮರದ ಕಟ್ಟಿಗೆ, ಆತನನ್ನು ಕಟ್ಟಿಹಾಕಲು ಬಳಸಿದ ಹಗ್ಗ, ಕಬ್ಬಿಣದ ರಾಡ್‌ಗಳು, ಆರೋಪಿಗಳು ಶೆಡ್‌ ಒಳಗೆ ಹೋಗುವ ಸಿಸಿಟಿವಿ ದೃಶ್ಯಗಳು ಎಲ್ಲವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.. ಇದರ ಜೊತೆಗೆ ಹತ್ಯೆಯಾದಾಗ ಆರೋಪಿಗಳೆಲ್ಲರೂ ಅಲ್ಲೇ ಇದ್ದರು ಅನ್ನೋದಕ್ಕೆ ಮೊಬೈಲ್‌ ಟವರ್‌ ಡಂಪ್‌ ಡಿಟೇಲ್ಸ್‌ ಕೂಡಾ ಸಿಕ್ಕಿದೆ ಎಂದು ತಿಳಿದುಬಂದಿದೆ..

ಇನ್ನು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದ ಕಾರನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ..  ಶವವನ್ನ ಸಾಗಾಟ ಮಾಡಲು ಬಳಸಿದ ಕಾರು ಕೂಡಾ ಪೊಲೀಸರ ವಶದಲ್ಲಿದೆ.. ಇನ್ನು ಎಲ್ಲಾ ಆರೋಪಿಗಳು ಗಂಟೆಗಟ್ಟೆಲೆ ಒಬ್ಬರಿಗೊಬ್ಬರು ಮೊಬೈಲ್‌ನಲ್ಲಿ ಮಾತನಾಡಿರುವ ವಿವರ ಕೂಡಾ ಪೊಲೀಸರಿಗೆ ಸಿಕ್ಕಿದೆ.. ಇನ್ನು ಆರೋಪಿಗಳು ನೀಡಿರುವ ಹೇಳಿಕೆಗಳು ಕೂಡಾ ಕೊಲೆಗೆ ಸಂಬಂಧಿಸಿದ ಪ್ರಬಲ ಸಾಕ್ಷ್ಯಗಳು ಸಿಕ್ಕಂತಾಗಿದೆ..

ಇನ್ನು ಕೊಲೆ ಮಾಡಿದ ನಂತರ ಆರೋಪಿಗಳು ಸಬ್‌ ಇನ್ಸ್‌ಪೆಕ್ಟರ್‌ ಒಬ್ಬರನ್ನು ಸಂಪರ್ಕಿಸಿದ ವಿವರಗಳೂ ಪೊಲೀಸರಿಗೆ ಸಿಕ್ಕಿದೆ.. ತಪ್ಪಿಸಿಕೊಳ್ಳಲು ಏನು ಮಾಡಬೇಕು ಎಂಬ ಸಲಹೆ ಪಡೆಯಲಾಗಿದೆ ಎನ್ನಲಾಗಿದೆ.. ಸ್ಥಳದಲ್ಲಿ ಹಾಗೂ ದೇಹದ ಮೇಲೆ ಸಿಕ್ಕ ಫಿಂಗರ್‌ ಪ್ರಿಂಟ್‌ಗಳ ಬಗ್ಗೆ ತನಿಖೆ ನಡೆಯುತ್ತಿದೆ.. ಇನ್ನು ಆರೋಪಿಗಳು ಕುಡಿಯಲು ಬಳಸಿದ ವಾಟರ್‌ ಬಾಟಲ್‌ಗಳು, ಮದ್ಯದ ಬಾಟಲ್‌ಗಳು ಸಿಕ್ಕಿವೆ.. ಇನ್ನು ಶವ ಬಿಸಾಡಿ ಬರುವಾಗ ಕಾರಿನ ದೃಶ್ಯಗಳು ಕೂಡಾ ಸಿಸಿಟಿವಿಗೆ ಸಿಕ್ಕಿದೆ.. ಶವ ಬಿಸಾಡಲು ಆರೋಪಿಗಳಿಗೆ ನಟ ದರ್ಶನ್‌ ನೀಡಿದ 30 ಲಕ್ಷ ರೂಪಾಯಿ ಬಗ್ಗೆ ಮಾಹಿತಿ ಸಿಕ್ಕಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ..

 

Share Post