CinemaCrime

ಪವಿತ್ರಾ ಗೌಡ ಮೊದಲ ಗಂಡ ಸಂಜಯ್‌ ಸಿಂಗ್‌ ಈಗ ಎಲ್ಲಿದ್ದಾರೆ..?; ಪವಿತ್ರಾ ಬಗ್ಗೆ ಆತ ಹೇಳೊದೇನು..?

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಈಗ ಕೊಲೆ ಪ್ರಕರಣದ ಆರೋಪಿ.. ಸುಖದ ಸುಪತ್ತಿಗೆಯಲ್ಲಿ ಜೀವನ ಸಾಗಿಸುತ್ತಿದ್ದ ದರ್ಶನ್‌ ಈಗ ಪೊಲೀಸ್‌ ಆತಿಥ್ಯ ಸ್ವೀಕರಿಸುತ್ತಿದ್ದಾರೆ.. ಅವರ ಸ್ಥಿತಿಗೆ ಕಾರಣ ದರ್ಶನ್‌ ಗೆಳತಿ ಪವಿತ್ರಾ ಗೌಡ.. ದರ್ಶನ್‌ ಹಾಗೂ ಪವಿತ್ರಾ ಮದುವೆಯಾಗಿದ್ದಾರೋ ಇಲ್ಲವೋ ಗೊತ್ತಿಲ್ಲ, ಆದ್ರೆ ಇಬ್ಬರ ನಡುವೆ ಸಂಬಂಧ ಇರುವುದಂತೂ ಸತ್ಯ.. ಅಂದಹಾಗೆ ಪವಿತ್ರಾಗೌಡಗೆ ಈ ಹಿಂದೆಯೇ ಮದುವೆಯಾಗಿತ್ತು.. ಮೊದಲ ಗಂಡನೂ ಕೂಡಾ ಪವಿತ್ರಾಳನ್ನು ಚೆನ್ನಾಗಿಯೇ ನೋಡಿಕೊಂಡಿದ್ದ.. ಆದ್ರೆ ದರ್ಶನ್‌ ಸಹವಾಸಕ್ಕೆ ಬಿದ್ದ ಮೇಲೆ ಗಂಡನಿಗೆ ಡಿವೋರ್ಸ್‌ ಕೊಟ್ಟು ಪವಿತ್ರಾ ಗೌಡ ದರ್ಶನ್‌ ತೆಕ್ಕೆ ಸೇರಿದ್ದಳು.. ಮುಂದೆ ಏನೆಲ್ಲಾ ರಾದ್ಧಾಂತಗಳಾದವು ಅನ್ನೋದು ಎಲ್ಲರಿಗೂ ಗೊತ್ತೇ ಇದೆ.. ಕೊನೆಗೆ ದರ್ಶನ್‌ ಕೊಲೆ ಕೇಸ್‌ ನಲ್ಲಿ ಅರೆಸ್ಟ್‌ ಆಗಿದ್ದಾರೆ..
ಅಂದಹಾಗೆ, ಬೆಂಗಳೂರು ಗ್ರಾಮಾಂತರ ತಲಘಟ್ಟಾಪುರ ಪವಿತ್ರಾ ಗೌಡರ ತವರು.. ಈಕೆ ಬಿಸಿಎ ಪದವೀಧರೆ.. ಪವಿತ್ರಾ ಗೌಡಗೆ 18 ವರ್ಷಕ್ಕೇ ಉತ್ತರ ಪ್ರದೇಶ ಮೂಲದ ಸಂಜಯ್‌ ಸಿಂಗ್‌ ಎಂಬಾತನ ಜೊತೆ ಮದುವೆಯಾಗುತ್ತೆ.. ಇವರಿಗೆ ಒಂದು ಹೆಣ್ಣು ಮಗು ಕೂಡಾ ಆಗುತ್ತೆ.. ಈಗ ಪವಿತ್ರಾಗೌಡ ಜೊತೆಯೇ ಖುಷಿ ಹೆಸರಿನ ಈ ಹೆಣ್ಣು ಮಗಳಿದ್ದಾಳೆ.. ಆದ್ರೆ ಗಂಡ ಸಂಜಯ್‌ ಸಿಂಗ್‌ ಎಲ್ಲಿದ್ದಾರೆ, ಹೇಗಿದ್ದಾರೆ ಎಂಬುದರ ಬಗ್ಗೆ ಇದುವರೆಗೂ ಯಾರಿಗೂ ಮಾಹಿತಿ ಇರಲಿಲ್ಲ.. ಆದ್ರೆ, ಕೊಲೆ ಕೇಸ್‌ನಲ್ಲಿ ದರ್ಶನ್‌ ಹಾಗೂ ಪವಿತ್ರಾಗೌಡ ಬಂಧನವಾಗುತ್ತಿದ್ದಂತೆ, ಪವಿತ್ರಾಳ ಮೊದಲ ಗಂಡ ಸಂಜಯ್‌ ಸಿಂಗ್‌ ಮಾಧ್ಯಮವೊಂದಕ್ಕೆ ಮಾತನಾಡಿದ್ದಾರೆ.. ಸಂಜಯ್‌ ಸಿಂಗ್‌ ಉತ್ತರ ಪ್ರದೇಶದ ಮೂಲದವನಾಗಿದ್ದು, ಒಳ್ಳೆಯ ವಿದ್ಯಾವಂತ ಕೂಡಾ.. ೨೦೦೨ರಲ್ಲಿ ಸಂಜಯ್‌ ಗೌಡ ಕೆಲಸ ಅರಸಿ ಬೆಂಗಳೂರಿಗೆ ಬಂದು ನೆಲೆಸಿದ್ದರಂತೆ.. ಒಳ್ಳೆಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಂತೆ.. ಈ ವೇಳೆ ಪವಿತ್ರಾಗೌಡ ಪರಿಚಯವಾಗಿದ್ದು, ಅದು ಪ್ರೀತಿಯಾಗಿ ಬದಲಾಗಿದೆ.. ಅನಂತರ ಇಬ್ಬರೂ ಮದುವೆಯಾಗಿದ್ದಾರೆ.. ಇವರಿಬ್ಬರಿಗೆ ಮದುವೆಯಾದ ಮೂರು ವರ್ಷಕ್ಕೆ ಖುಷಿ ಹುಟ್ಟಿದ್ದಾಳೆ..
ಮಗುವಾದ ಮೇಲೆ ಪವಿತ್ರಾಗೌಡಗೆ ಚಿತ್ರರಂಗದ ನಟಿಯೊಬ್ಬಳು ಪರಿಚಯವಾಗಿದ್ದು, ಆಕೆ ಮೂಲಕ ಪವಿತ್ರಾಗೌಡಗೂ ಚಿತ್ರರಂಗದ ನಂಟು ಬೆಳೆದಿದೆ.. ಇದೇ ವೇಳೆ ಪವಿತ್ರಾಗೌಡಗೆ ನಟ ದರ್ಶನ್‌ ಪರಿಚಯವಾಗಿದ್ದಾರೆ.. ಆಗಿನಿಂದ ನಮ್ಮಿಬ್ಬರ ನಡುವೆ ಮನಸ್ತಾಪವಾಯಿತು.. ಒಂದು ವರ್ಷ ಬೇರೆ ಬೇರೆಯಾಗಿ ವಾಸವಿದ್ದೆವು.. ಕೆಲ ದಿನಗಳ ನಂತರ ಪವಿತ್ರಾಗೌಡ ಬಂದು, ನಟ ದರ್ಶನ್ ಜೊತೆ ಮದುವೆ ಆಗಬೇಕು ಅಂದುಕೊಂಡಿದ್ದೇನೆ. ನಿನ್ನಿಂದ ವಿಚ್ಛೇದನ ಬೇಕು ಅಂತ ಹೇಳಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದಳು. ಆಮೇಲೆ 2013ರಲ್ಲಿ ನಮ್ಮ ವಿಚ್ಛೇದನ ಆಯ್ತು. ಪವಿತ್ರಾ, ದರ್ಶನ್ ಮದುವೆಯಾಗಿದ್ದಾರಾ? ಇಲ್ಲವಾ? ಅಂತ ನನಗೆ ಗೊತ್ತಿಲ್ಲ ಎಂದು ಪವಿತ್ರಾಳ ಮೊದಲ ಗಂಡ ಸಂಜಯ್‌ ಸಿಂಗ್‌ ಹೇಳಿಕೊಂಡಿದ್ದಾರೆ.. ವಿಚ್ಛೇದನ ಆದ ಮೇಲೆ ಪವಿತ್ರಾ ನಂಬರ್‌ ನನ್ನ ಬಳಿ ಇಲ್ಲ.. ಮಗಳ ಆಕೆಯ ಬಳಿಯೇ ಇದ್ದಾಳೆ.. ನಾನು ಪವಿತ್ರಾ ಗೌಡ ಅವರ ತಂದೆ-ತಾಯಿಗೆ ಕರೆ ಮಾಡುತ್ತೇನೆ.. ಆಗ ಅಲ್ಲಿನ ಮಗಳು ಇದ್ದರೆ ಮಾತನಾಡುತ್ತೇನೆ.. 12 ವರ್ಷಗಳಲ್ಲಿ ನಾನು ಮಗಳ ಜೊತೆ ಎರಡು ಬಾರಿ ಮಾತನಾಡಿದ್ದು, 2017ರಲ್ಲಿ ಬೆಂಗಳೂರಿಗೆ ಬಂದು ಅವಳನ್ನು ಭೇಟಿ ಮಾಡಿದ್ದೆ ಎಂದು ಸಂಜಯ್‌ ಸಿಂಗ್‌ ಹೇಳಿಕೊಂಡಿದ್ದಾರೆ..
ಸದ್ಯ ಉತ್ತರ ಪ್ರದೇಶದಲ್ಲೇ ಇದ್ದೇನೆ ಎಂದಿರುವ ಸಂಜಯ್‌ ಸಿಂಗ್‌, ಉತ್ತರ ಪ್ರದೇಶದಲ್ಲಿ ಶಾಲೆಯೊಂದು ನಡೆಸುತ್ತಿದ್ದು, ಸುಖವಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.. ಅವರ ಇಬ್ಬರು ಸಹೋದರರು ವಿದೇಶದಲ್ಲಿ ಸೆಟ್ಲ್‌ ಆಗಿದ್ದಾರಂತೆ..

Share Post