CrimeDistricts

ತಲ್ವಾರ್ ಹಿಡಿದು ಬಡಿದಾಡಿಕೊಂಡ ಉಡುಪಿಯ ಪುಡಿ ರೌಡಿಗಳು!

ಉಡುಪಿ; ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳು ತಲ್ವಾರ್ ಹಿಡಿದು ಬಡಿದಾಡಿಕೊಂಡಿರುವ ಘಟನೆ ಉಡುಪಿ‌ನಗರದಲ್ಲಿ ನಡೆದಿದೆ.. ಇಲ್ಲಿನ ಕುಂಜಿಬೆಟ್ಟು ರಸ್ತೆಯಲ್ಲಿ ಕಾರು ಮಾರಾಟ ವಿಚಾರವಾಗಿ ಜಗಳ ನಡೆದು, ಅದು ವಿಕೋಪಕ್ಕೆ ತಿರುಗಿದೆ.. ಘಟನೆಯಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ..

  ಮೇ 18 ರ ರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.. ಇದರ ವಿಡಿಯೋ ಈಗ ವೈರಲ್ ಆಗುತ್ತಿದೆ. ಕಾಪು ತಾಲೂಕಿನ ಎರಡು ಗುಂಪುಗಳು ಕಾರು ಮಾರಾಟ ವಿಚಾರವಾಗಿ ತಲವಾರು ಹಿಡಿದುಕೊಂಡು ನಡು ರಸ್ತೆಯಲ್ಲೇ ಹೊಡೆದಾಡಿದ್ದಾರೆ.

  ಇನ್ನು ಇದೇ ವೇಳೆ ಕಾರು ಅಡ್ಡಾದಿಡ್ಡಿ ಚಲಾಯಿಸಿ ಡಿಕ್ಕಿ ಹೊಡೆದಿದ್ದಾರೆ.. ಈ ಸಂಬಂಧ ಪೊಲೀಸರು ಎಂಟು ಪುಡಿ ರೌಡಿಗಳನ್ನು ಬಂಧಿಸಿದ್ದಾರೆ..

 

Share Post