CrimeDistrictsHealth

ತಿರುಪತಿಗೆ ಹೊರಟಿದ್ದವರಿಗೆ ಅಡ್ಡ ಬಂದ ಯಮ; ಅಪಘಾತದಲ್ಲಿ ರಾಜ್ಯದ ನಾಲ್ವರ ದುರ್ಮರಣ!

ಹಾವೇರಿ; ಹಾವೇರಿಯಿಂದ ತಿರುಪತಿಗೆ ಹೊರಟಿದ್ದ ಕಾರು ಅಪಘಾತಕ್ಕೀಡಾಗಿ, ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ… ಘಟನೆಯಲ್ಲಿ ಇನ್ನೂ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ… ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಹಲಗೇರಿ ಬೈಪಾಸ್‌ ಬಳಿ ಈ ದುರ್ಘಟನೆ ನಡೆದಿದೆ.. 

ನಸುಕಿನ ಜಾವ ಕಾರು ಪಲ್ಟಿಯಾಗಿದ್ದರಿಂದ ಈ ದುರಂತ ನಡೆದಿದೆ.. ಹಾವೇರಿಯ ಬಾರ್ಕಿ ಹಾಗೂ ಸಮಗಂಡಿ ಎಂಬ ಎರಡು ಕುಟುಂಬಗಳು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುತ್ತಿದ್ದರು.. ಈ ವೇಳೆ ಈ ದುರಂತ ನಡೆದಿದೆ.. ಐಶ್ವರ್ಯಾ ಈರಪ್ಪ ಬಾರ್ಕಿ, ಸುರೇಶ್‌ ವೀರಪ್ಪ ಜಾಡಿ, ಚೇತನಾ ಸಮಗಂಡ, ಪವಿತ್ರಾ ಪ್ರಭುರಾಜ ಸಮಗಂಡಿ ಸಾವನ್ನಪ್ಪಿದ್ದಾರೆ..

ಘಟನೆಯಲ್ಲಿ ಚನ್ನವೀರಪ್ಪ ಜಾಡಿ, ಸಾವಿತ್ರ ಜಾಡಿ, ವಿಕಾಶ ಹೊನ್ನಪ್ಪ ಬಾರ್ಕಿ, ಹೊ‌ನ್ನಪ್ಪ ನೀಲಪ್ಪ ಬಾರ್ಕಿ, ಪ್ರಭುರಾಜ ಈರಪ್ಪ ಸಮಗಂಡಿ, ಗೀತಾ ಹೊನ್ನಪ್ಪ ಬಾರ್ಕಿ ಗಂಭೀರವಾಗಿ ಗಾಯಗೊಂಡಿದ್ದು, ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..

 

Share Post