CrimeDistricts

ಮತ್ತೆ ಜೈಲು ಪಾಲಾದ ಮುರುಘಾ ಮಠದ ಶಿವಮೂರ್ತಿ!

ಚಿತ್ರದುರ್ಗ; ಸುಪ್ರೀಂ ಕೋರ್ಟ್‌ ಜಾಮೀನು ರದ್ದು ಮಾಡಿದ ಹಿನ್ನೆಲೆಯಲ್ಲಿ ಮುರುಘಾ ಮಠದ ಶಿವಮೂರ್ತಿ ಮತ್ತೆ ಜೈಲು ಸೇರಿದ್ದಾರೆ.. ಎರಡು ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿ ದಾವಣಗೆರೆಯಲ್ಲಿದ್ದ ಶಿವಮೂರ್ತಿ ಈಗ ಮತ್ತೆ  ಚಿತ್ರದುರ್ಗದ ಕಾರಾಗೃಹ ಸೇರಿದ್ದಾರೆ..

ಹೈಕೋರ್ಟ್‌ ಶಿವಮೂರ್ತಿಗೆ ಜಾಮೀನು ಮಂಜೂರು ಮಾಡಿತ್ತು.. ಆದ್ರೆ ಇದನ್ನು ಪ್ರಶ್ನೆ ಮಾಡಿ ಮೈಸೂರಿನ ಒಡನಾಡಿ ಸಂಸ್ಥೆ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು.. ಪೋಕ್ಸೋ ಪ್ರಕರಣದಲ್ಲಿ ಶಿವಮೂರ್ತಿಯವರನ್ನು ಬಂಧಿಸಲಾಗಿತ್ತು.. ಸುಮಾರು ಒಂದು ವರ್ಷ ಕಾಲ ಜೈಲಿನಲ್ಲಿದ್ದ ಅವರಿಗೆ ಇತ್ತೀಚೆಗೆ ಹೈಕೋರ್ಟ್‌ ಜಾಮೀನು ನೀಡಿತ್ತು.. ಆದ್ರೆ ಸುಪ್ರೀಂ ಕೋರ್ಟ್‌ ಇದನ್ನು ರದ್ದು ಮಾಡಿತ್ತು..

ಏಳು ದಿನಗಳ ಒಳಗೆ ನ್ಯಾಯಾಲಯಕ್ಕೆ ಹಾಜರಾಗಿ ಶರಣಾಗುವಂತೆ ಶಿವಮೂರ್ತಿಗೆ ಸುಪ್ರೀಂ ಕೋರ್ಟ್‌ ಸೂಚನೆ ಕೊಟ್ಟಿತ್ತು.. ಅದರಂತೆ ಶಿವಮೂರ್ತಿಯವರು ಕೋರ್ಟ್‌ಗೆ ಶರಣಾಗಿದ್ದಾರೆ.. ಮೇ 27ರವರೆಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ..

Share Post