CrimePolitics

ವಿದೇಶದಿಂದ ವಾಪಸ್‌ ಬರಲು ಪ್ರಜ್ವಲ್‌ಗೆ ಬುಲಾವ್‌; ಡಾ.ಜಿ.ಪರಮೇಶ್ವರ್‌

ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ತೀವ್ರಗೊಂಡಿದೆ.. ಮಹಿಳೆಯೊಬ್ಬರು ಹೊಳೆ ನರಸೀಫುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಅದರ ಆಧಾರದ ಮೇಲೆ ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.. ಈ ಬೆನ್ನಲ್ಲೇ ವಿದೇಶದಕ್ಕೆ ತೆರಳಿರುವ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಭಾರತಕ್ಕೆ ಕರೆಸಿಕೊಳ್ಳಲು ತಯಾರಿ ನಡೆಯುತ್ತಿದೆ.. ಈ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರೇ ಮಾಹಿತಿ ಕೊಟ್ಟಿದ್ದಾರೆ..

ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಡಾ.ಜಿಪರಮೇಶ್ವರ್‌, ಪ್ರಕರಣವನ್ನು ಎಸ್‌ಐಟಿ ತನಿಖೆಗೆ ನೀಡಿದ್ದೇವೆ.. ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ.. ಇದರ ಯಾರೇ ಇದ್ದರೂ ಅವರ ವಿರುದ್ಧ ಕ್ರಮ ಆಗಲಿದೆ ಎಂದು ಹೇಳಿದ್ದಾರೆ.. ಪೆನ್‌ ಡ್ರೈವ್‌ನಲ್ಲಿನ ವಿಡಿಯೋಗಳನ್ನು ಫೊರೆನ್ಸಿಕ್‌ ಲ್ಯಾಬ್‌ಗೆ ಕಳುಹಿಸಿ ಪರಿಶೀಲನೆ ನಡೆಸಲಾಗುತ್ತದೆ.. ಜೊತೆಗೆ ಸಾಕ್ಷ್ಯಗಳನ್ನು ಕಲೆ ಹಾಕುತ್ತೇವೆ.. ವಿದೇಶದಿಂದ ಅವರನ್ನು ವಾಪಸ್‌ ಕರೆಸಿಕೊಳ್ಳುತ್ತೇವೆ ಎಂದು ಪರಮೇಶ್ವರ್‌ ಹೇಳಿದ್ದಾರೆ..

ಎಸ್‌ಐಟಿ ತಂಡಕ್ಕೆ ಎಲ್ಲಾ ಅಧಿಕಾರವನ್ನೂ ನೀಡಿದ್ದೇವೆ.. ಪ್ರಕರಣದ ತನಿಖೆಗೆ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಇದೆ.. ದೂರುದಾರರು ಯಾವ ಹೆಸರು ಹೇಳಿದ್ದಾರೋ ಅವರ ವಿರುದ್ಧ ಕ್ರಮ ಆಗೇ ಆಗಲಿದೆ.. ರೇವಣ್ಣ ಇರಲಿ, ಬೇರೆ ಯಾರೇ ಇದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ.. ಸಂತ್ರಸ್ತರಿಗೆ ಭಯ ಇದ್ದರೆ ಅವರಿಗೆ ಸರ್ಕಾರ ಭದ್ರತೆ ಒದಗಿಸಲು ಸಿದ್ಧವಿದೆ ಎಂದು ಪರಮೇಶ್ವರ್‌ ಇದೇ ವೇಳೆ ಹೇಳಿದ್ದಾರೆ..

 

Share Post