BengaluruCrime

ಗರ್ಲ್‌ಫ್ರೆಂಡ್‌ ಜೊತೆ ಸ್ನೇಹಿತನ ಮಾತು; ರೊಚ್ಚಿಗೆದ್ದ ಪ್ರೇಮಿಯಿಂದ ಚಾಕು ಇರಿತ!

ಬೆಂಗಳೂರು; ತನ್ನ ಗರ್ಲ್‌ಫ್ರೆಂಡ್‌ ಜೊತೆ ಸ್ನೇಹಿತ ಫೋನ್‌ನಲ್ಲಿ ಮಾತನಾಡಿದ ಎಂಬ ಕಾರಣಕ್ಕೆ ಪ್ರೇಮಿಯೊಬ್ಬ ತನ್ನ ಸ್ನೇಹಿತನಿಗೆ ಚಾಕುವಿನಿಂದ ಇರಿದಿದ್ದಾನೆ. ಡಿಸೆಂಬರ್‌ 19ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಾಯಂಡಳ್ಳಿ ಸಮೀಪ ಈ ಕೃತ್ಯ ಎಸಗಲಾಗಿದೆ. ಕಾರ್ತೀಕ್‌ ಎಂಬಾತನಿಗೆ ಚಾಕುವಿನಿಂದ ಇರಿಯಲಾಗಿದೆ. ಆತ ಈಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.

ಚಾಕು ಇರಿದ ಆರೋಪದ ಮೇಲೆ ಧನುಷ್‌ ಹಾಗೂ ಶಾಬುದ್ದೀನ್‌ ಎಂಬುವವರನ್ನು ಚಂದ್ರಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಾಕು ಇರಿತಕ್ಕೊಳಗಾದ ಕಾರ್ತೀಕ್‌ ಹಾಗೂ ಧನುಷ್‌ ಇಬ್ಬರೂ ಒಂದೇ ಆರಿಯಾದವರು ಹಾಗೂ ಸ್ನೇಹಿತರು. ಆರೋಪಿ ಧನುಷ್‌ಗೆ ಗರ್ಲ್‌ಫ್ರೆಂಡ್‌ ಇದ್ದಾಳೆ. ಇದು ಗೊತ್ತಿದ್ದೂ ಆಕೆಯ ಫೋನ್‌ ನಂಬರ್‌ ಸಂಪಾದಿಸಿಕೊಂಡಿದ್ದ ಕಾರ್ತೀಕ್‌ ಆಕೆಗೆ ಆಗಾಗ ಕರೆ ಮಾಡುತ್ತಿದ್ದ. ಸಾಲದೆಂಬಂತೆ ಆಕೆಯನ್ನು ಫಾಲೋ ಮಾಡಿ ಕಾಟ ಕೊಡ್ತಿದ್ದ.
ಈ ವಿಚಾರವನ್ನು ಆಕೆ ತಮ್ಮ ಬಾಯ್‌ಫ್ರೆಂಡ್‌ ಧನುಷ್‌ಗೆ ತಿಳಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಧನುಷ್‌ ತನ್ನ ಸ್ನೇಹಿತ ಶಾಬುದೀನ್‌ ಜೊತೆಗೂಡಿ ಕಾರ್ತೀಕ್‌ ಗೆ ಬುದ್ಧಿ ಕಲಿಸಲು ಬಂದಿದ್ದಾರೆ. ಡಿಸೆಂಬರ್‌ 19ರಂದು ಸಂಜೆ ಕಾರ್ತೀಕ್‌ ಮನೆ ಬಳಿ ಬಂದ ಇಬ್ಬರೂ ಆತನನ್ನು ಹೊರಗೆ ಕರೆದು ಸ್ವಲ್ಪ ದೂರು ಕರೆದುಕೊಂಡು ಹೋಗಿ ಮಚ್ಚು, ಲಾಂಗ್‌ನಿಂದ ದಾಳಿ ಮಾಡಿ ಪರಾರಿಯಾಗಿದ್ದರು.

 

Share Post