BengaluruHealth

ಪ್ರಸಾದ ಸೇವಿಸಿ ಅಸ್ವಸ್ಥಳಾಗಿದ್ದ ಮಹಿಳೆ ಆಸ್ಪತ್ರೆಯಲ್ಲಿ ಸಾವು!

ದೇವನಹಳ್ಳಿ; ದೇವಸ್ಥಾನದಲ್ಲಿ ಕೊಟ್ಟಿದ್ದ ಪ್ರಸಾದ ಸೇವಿಸಿದ ಮೇಲೆ ಅಸ್ವಸ್ಥಳಾಗಿದ್ದ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಸಿಲಿಕಾನ್‌ ಸಿಟಿ ಆಸ್ಪತ್ರೆಯಲ್ಲಿ ಮಹಿಳೆ ಮೃತಪಟ್ಟಿದ್ದಾರೆ.

ಹೊಸಕೋಟೆಯ ಕಾವೇರಿ ನಗರದ ವಾಸಿ ಸಿದ್ದಗಂಗಮ್ಮ ಎಂಬ ಅರವತ್ತು ವರ್ಷದ ಮಹಿಳೆ ಮೃತಪಟ್ಟವರು. ಹನುಮ ಜಯಂತಿ ಪ್ರಯುಕ್ತ ಹೊಸಕೋಟೆಯಲ್ಲಿ ವೆಂಕಟರಮಣ, ಊರ ಬಾಗಿಲು ಆಂಜನೇಯ, ಕೋಟೆ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಭಕ್ತರು ಪುಲಿಯೋಗರೆ, ಪಾಯಸ, ಲಡ್ಡು ಸೇವಿಸಿದ್ದರು.

ಪ್ರಸಾದ ತಿಂದಿದ್ದ ಹಲವರು ಅಸ್ವಸ್ಥರಾಗಿದ್ದಾರೆ. ಹೊಸಕೋಟೆ, ಕೋಲಾರ ಹಾಗೂ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹದಿನೈದಕ್ಕೂ ಹೆಚ್ಚು ಮಂದಿ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ. ಇದರಲ್ಲಿ ಸಿದ್ದಗಂಗಮ್ಮ ಸಾವನ್ನಪ್ಪಿದ್ದಾರೆ.

ಸಿದ್ದಗಂಗಮ್ಮ ಅವರ ಪತಿ ಶಿವಣ್ಣ ಅವರು ಲಡ್ಡುವನ್ನು ತೆಗೆದುಕೊಂಡು ಬಂದು ಕೊಟ್ಟಿದ್ದರು. ಅದನ್ನು ತಿಂದಿದ್ದ ಸಿದ್ದಗಂಗಮ್ಮ ವಾಂತಿ, ಬೇಧಿಯಿಂದ ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಸಿಲಿಕಾನ್‌ ಸಿಟಿ ಆಸ್ಪತ್ರೆಗೆ ಸೇರಿಸಲಾಗಿತ್ತು.

 

Share Post