CrimeDistricts

ಹುಲಿ ದಾಳಿಗೆ ಮತ್ತೊಂದು ಬಲಿ; 52 ವರ್ಷದ ಮಹಿಳೆಯನ್ನು ಕೊಂದ ವ್ಯಾಘ್ರ

ಮೈಸೂರು; ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿಗೆ ಮತ್ತೊಬ್ಬರು ಬಲಿಯಾಗಿದ್ದಾರೆ. 52 ವರ್ಷದ ಮಹಿಳೆಯೊಬ್ಬರು ಹೊಸದ ಕೆಲಸಕ್ಕೆ ಹೋಗಿದ್ದಾಗಿ ಹುಲಿ ದಾಳಿ ಮಾಡಿದ್ದು, ಆಕೆಯನ್ನು ಹುಲಿ ಕೊಂದಿದೆ. ದೇಹದ ಕೆಲ ಭಾಗ ಕಿತ್ತು ತಿಂದಿದೆ. ನಂಜನಗೂಡು ತಾಲ್ಲೂಕಿನ ನಾಗಣಪುರ ಗ್ರಾಮದ ಬಳಿಯಲ್ಲಿ ಈ ಘಟನೆ ನಡೆದಿದೆ.

ಕೆಲ ತಿಂಗಳುಗಳಿಂದ ಇಲ್ಲಿ ಹುಲಿ ಹಾವಳಿ ಹೆಚ್ಚಾಗಿದೆ. ಈ ಹಿಂದೆಯೂ ವ್ಯಕ್ತಿಯೊಬ್ಬನನ್ನು ಹುಲಿ ಕೊಂದಿತ್ತು. ದನಗಳ ಮೇಲೂ ದಾಳಿ ಮಾಡಿತ್ತು. ಇದೀಗ ಮತ್ತೆ ರತ್ನಮ್ಮ ಎಂಬುವವರನ್ನು ಬಲಿ ಪಡೆದಿದೆ. ಹೀಗಾಗಿ ಅರಣ್ಯ ಇಲಾಖೆ ಸೂಕ್ತ ಕೈಗೊಳ್ಳಬೇಕು. ಹುಲಿಯನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

 

Share Post