DistrictsPolitics

ನಾನು ಯಾರಿಗೂ ಹೆದರಲ್ಲ, ಬದಲಾದರೆ ಪರಮೇಶ್ವರ್‌ ಸಿಎಂ ಆಗಲಿ; ಸಚಿವ ಕೆ.ಎನ್‌.ರಾಜಣ್ಣ

ತುಮಕೂರು; ಕಾಂಗ್ರೆಸ್‌ ಹೈಕಮಾಂಡ್‌ ಖಡಕ್‌ ಸೂಚನೆ ಕೊಟ್ಟರೂ ಕೂಡಾ ಸಿಎಂ ಹುದ್ದೆ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ನಿನ್ನೆ ನಾನೇ ಐದು ವರ್ಷ ಸಿಎಂ ಆಗಿರುತ್ತೇನೆ ಎಂದಿದ್ದಾರೆ. ಹೀಗಿರುವಾಗಲೇ ಸಚಿವ ಕೆ.ಎನ್‌.ರಾಜಣ್ಣ ಕೂಡಾ ಇದಕ್ಕೊಂದು ಟ್ವಿಸ್ಟ್‌ ಕೊಟ್ಟಿದ್ದಾರೆ.

ತುಮಕೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಸಿದ್ದರಾಮಯ್ಯ ಅವರು ಹೊರತುಪಡಿಸಿದರೆ ಗೃಹ ಸಚಿವ ಜಿ.ಪರಮೇಶ್ವರ್‌ ಅವರೇ ಸಿಎಂ ಆಗಬೇಕು ಎಂದಿದ್ದಾರೆ. ಪರಮೇಶ್ವರ್‌ ಅವರು ಹೋಮ್‌ ಮಿನಿಸ್ಟರ್‌ ಇದ್ದಾರೆ. ಸಿಎಂ ಆಗುವ ಅವಕಾಶ ಅವರಿಗಿದೆ. ಮುಂದೆ ಏನು ಬೇಕಾದರೂ ಆಗಬಹುದು ಎಂದು ಕೆ.ಎನ್‌.ರಾಜಣ್ಣ ಹೇಳಿದರು.

ವೇದಿಕೆಯಲ್ಲಿ ಪರಮೇಶ್ವರ್‌ ಕೂಡಾ ಇದ್ದಿದ್ದರಿಂದ ಕೆ.ಎನ್‌.ರಾಜಣ್ಣ ಅವರು ಪರಮೇಶ್ವರ್‌ ಪರ ಬ್ಯಾಟ್‌ ಬೀಸಿದರು. ಸಿದ್ದರಾಮಯ್ಯ ಅವರು ಇರೋವರೆಗೂ ನಾನು ಮತ್ತು ಪರಮೇಶ್ವರ್‌ ಸಿದ್ದರಾಮಯ್ಯ ಪರ ಇರುತ್ತೇವೆ. ಸಿದ್ದರಾಮಯ್ಯ ಅವರು ಹೊರತುಪಡಿಸಿದರೆ ಪರಮೇಶ್ವರ್‌ ಸಿಎಂ ಆಗಲಿ ಎಂದು ಹೇಳಿದರು.

ಏನೂ ಮಾತನಾಡಬಾರದು ಎಂದು ಹೈಕಮಾಂಡ್‌ ಹೇಳಿದೆ. ಆದ್ರೆ ನಾನು ಯಾರಿಗೂ ಹೆದರಲ್ಲ, ಎಐಸಿಸಿಗೂ ಹೆದರೋದಿಲ್ಲ ಎನ್ನುವ ಮೂಲಕ ರಾಜಣ್ಣ ಸಂದೇಶವೊಂದರನ್ನು ರವಾನಿಸಿದ್ದಾರೆ.

 

Share Post