BengaluruCrime

ಹಾಡಹಗಲೇ ಚಿನ್ನದಂಗಡಿ ದರೋಡೆ; ಫೈರ್‌ ಮಾಡಿ ಕೆಜಿಗಟ್ಟಲೆ ಚಿನ್ನದೊಂದಿಗೆ ಎಸ್ಕೇಪ್‌

ಬೆಂಗಳೂರು; ಬೆಂಗಳೂರಿನಲ್ಲಿ ಹಾಡಹಗಲೇ ಚಿನ್ನದಂಗಡಿ ದರೋಡೆ ಮಾಡಲಾಗಿದೆ. ಬ್ಯಾಡರಹಳ್ಳಿ ಪೈಪ್‌ಲೈನ್‌ ರಸ್ತೆಯಲ್ಲಿರುವ ಜ್ಯುವೆಲರಿ ಅಂಗಡಿಯಲ್ಲಿ ಈ ದರೋಡೆ ನಡೆದಿದೆ. ಎರಡು ಬೈಕ್‌ಗಳಲ್ಲಿ ಬಂದಿದ್ದ ನಾಲ್ವರು ದರೋಡೆಕೋರರು, ಚಿನ್ನಾಭರಣ ಅಂಗಡಿಯ ಒಳನುಗ್ಗಿ, ಶಟರ್‌ ಎಳೆದಿದ್ದಾರೆ. ಒಳಗಿದ್ದ ಮಾಲೀಕ ಮನೋಜ್‌ಗೆ ಪಿಸ್ತೂಲ್‌ ತೋರಿಸಿದ್ದಾರೆ. ಆಗ ಮನೋಜ್‌ ಪ್ರತಿರೋಧ ತೋರಿದಾಗ ಮನೋಜ್‌ ತೊಡೆಗೆ ಗುಂಡು ಹಾರಿಸಿದ್ದಾರೆ.

ಅನಂತರ ಅಂಗಡಿಯಲ್ಲಿದ್ದ ಒಂದು ಕೆಜಿಗೂ ಹೆಚ್ಚಿನ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಆದ್ರೆ ಮಾಲೀಕ ಮನೋಜ್‌ ಗಾಯದ ನಡುವೆಯೂ ದರೋಡೆಕೋರರನ್ನು ಚೇಸ್‌ ಮಾಡುವ ಪ್ರಯತ್ನ ಮಾಡಿದ್ದಾರೆ. ಒಂದು ಬೈಕ್‌ನ್ನು ಹಿಡಿದಿದ್ದಾರೆ. ಆದ್ರೆ ದರೋಡೆಕೋರರು ತಪ್ಪಿಸಿಕೊಂಡು ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ. ಆದ್ರೆ ಒಂದು ಬೈಕ್‌ ಅಲ್ಲಿಯೇ ಬಿಟ್ಟಿದ್ದಾರೆ.

ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

 

Share Post