Bengaluru

ಬೆಂಗಳೂರಿನಲ್ಲಿ 15 ಕಡೆ ಐಟಿ ಅಧಿಕಾರಿಗಳ ದಾಳಿ; ದಾಖಲೆಗಳ ಪರಿಶೀಲನೆ

ಬೆಂಗಳೂರು; ಆದಾಯ ತೆರಿಗೆ ಇಲಾಖೆಗೆ ಸರಿಯಾಗಿ ಆದಾಯದ ಮಾಹಿತಿ ಒದಗಿಸದ ಆರೋಪದ ಮೇಲೆ ಐಟಿ ಅಧಿಕಾರಿಗಳು ಕಳೆದ ಕೆಲ ದಿನಗಳಿಂದ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ವ್ಯಾಪಾರಸ್ಥರು ಹಾಗೂ ಉದ್ಯಮಿಗಳ ಮನೆಗಳನ್ನೇ ಐಟಿ ಅಧಿಕಾರಿಗಳು ಟಾರ್ಗೆಟ್‌ ಮಾಡಿದ್ದಾರೆ. ಇವತ್ತೂ ಕೂಡಾ ಬೆಂಗಳೂರು ನಗರದಲ್ಲಿ ಹದಿನೈದು ಕಡೆ ಏಕಕಾಲದಲ್ಲಿ ದಾಳಿ ನಡೆದಿದೆ.

ಬೆಂಗಳೂರು ನಗರದ ಪ್ರಮುಖ ಉದ್ಯಮಿಗಳು, ಜ್ಯುವೆಲರಿ ಶಾಪ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ಸರ್ಜಾಪುರ ಸಮೀಪವಿರುವ ಮುಳ್ಳೂರು, ಆರ್‌ಎಂವಿ ಎಕ್ಸ್ಟೆಕ್ಷನ್‌, ಬಿಇಎಲ್ ಸರ್ಕಲ್, ಮಲ್ಲೇಶ್ವರಂ, ಡಾಲರ್ಸ್ ಕಾಲೋನಿ ಸೇರಿದಂತೆ 15ಕ್ಕೂ ಹೆಚ್ಚು ಕಡೆ ಈ ದಾಳಿ ನಡೆಸಲಾಗಿದೆ.

 

Share Post