BengaluruCinema

ಕರ್ನಾಟಕ ಬಂದ್‌ಗೆ ಚಿತ್ರೋದ್ಯಮ ಬೆಂಬಲ; ಪ್ರತಿಭಟನೆಯಲ್ಲಿ ನಟ-ನಟಿಯರು ಭಾಗಿ

ಬೆಂಗಳೂರು; ಶುಕ್ರವಾರದ ಕರ್ನಾಟಕ ಬಂದ್‌ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಸಂಪೂರ್ಣ ಬೆಂಬಲ ಕೊಟ್ಟಿದೆ. ಪ್ರತಿಭಟನೆಯಲ್ಲಿ ನಟ-ನಟಿಯರೆಲ್ಲಾ ಪಾಲ್ಗಳ್ಳಲಿದ್ದಾರೆ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌.ಎಂ.ಸುರೇಶ್‌ ಮಾಹಿತಿ ನೀಡಿದ್ದಾರೆ. 

ನೆಲ, ಜಲ, ನಾಡಿನ ವಿಚಾರದಲ್ಲಿ ಚಿತ್ರೋದ್ಯಮ ಯಾವತ್ತಿಗೂ ಕನ್ನಡಿಗರ ಪರವಾಗಿದೆ. ಈ ಹಿಂದಿನ ಹೋರಾಟಗಳಲ್ಲೂ ಸಾಥ್‌ ಕೊಟ್ಟಿದೆ. ಈಗಲೂ ಹೋರಾಟಕ್ಕೆ ಸಾಥ್‌ ನೀಡಲಿದೆ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷರು ಹೇಳಿದ್ದಾರೆ. ಶುಕ್ರವಾರದ ದಿನ ಚಿತ್ರೋದ್ಯಮದ ಎಲ್ಲಾ ಚಟುವಟಿಕೆಗಳನ್ನು ಬಂದ್ ಮಾಡಿ ಎಲ್ಲರೂ ಬಂದ್ ಗೆ ಬೆಂಬಲ ವ್ಯಕ್ತಪಡಿಸಲಿದ್ದಾರೆ.

 

Share Post