CrimeDistricts

ಸಂಸದರ ಸಂಬಂಧಿಯ ಕಾರು ಅಪಘಾತ; ನೆರವಿಗೆ ಧಾವಿಸಿದ ಆಟೋ ಚಾಲಕ ಸಾವು..!

ಮೈಸೂರು; ಸಾವು ಅದ್ಯಾವ ರೀತಿಯಲ್ಲಿ ಬರುತ್ತದೋ ಗುರುತಿಸೋದಕ್ಕೆ ಆಗೋದಿಲ್ಲ. ಅದ್ರಲ್ಲೂ, ಕಷ್ಟದಲ್ಲಿರುವವರ ನೆರವಿಗೆ ಬಂದವರನ್ನೂ ಜವರಾಯ ಹೊತ್ತೊಯ್ದುಬಿಡುತ್ತಾನೆ. ಮೈಸೂರಿನಲ್ಲಿ ನಿನ್ನೆ ಸಂಜೆ ಅದೇ ಆಗಿದೆ. ಮಾನಂದವಾಡಿ ರಸ್ತೆಯಲ್ಲಿ ಚಾಮರಾನಗರ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್‌ ಅವರ ಸಹೋದರಿ ಮಗ ಧೀರಜ್‌ ಪ್ರಸಾದ್‌ ಅವರಿಗೆ ಸೇರಿದ ಅಪಘಾತಕ್ಕೀಡಾಗಿದೆ. ಅಶೋಕಪುರಂನ ರೈಲ್ವೆ ವರ್ಕ್‌ಶಾಪ್‌ ಬಳಿ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿದೆ.

ಈ ವೇಳೆ ಕಾರಿನಲ್ಲಿದ್ದ ನಾಲ್ವರು ಕಾರನ್ನು ತಳ್ಳಲು ಯತ್ನಿಸಿದ್ದಾರೆ. ಇದೇ ವೇಳೆ ಆಟೋ ಚಾಲಕ ರವಿಯವರನ್ನೂ ಕಾರು ತಳ್ಳಲು ಕರೆದಿದ್ದಾರೆ. ಈ ವೇಳೆ ಕಾರಿಗೆ ವಿದ್ಯುತ್‌ ಪ್ರವಹಿಸಿದೆ. ಇದರಿಂದಾಗಿ ಕಾರು ಚಾಲನೆ ಮಾಡುತ್ತಿದ್ದ ಕಿರಣ್‌ ಹಾಗೂ ಸಹಾಯಕ್ಕೆ ಬಂದಿದ್ದ ಆಟೋ ಚಾಲಕ ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Share Post