BengaluruDistrictsPolitics

ಡಾ.ಕೆ.ಸುಧಾಕರ್‌ ಕೆಲಸಕ್ಕೆ ಬಾರದ ಪ್ರಣಾಳಿಕೆ ಮಾಡಿದ್ರು; ರೇಣುಕಾಚಾರ್ಯ

ದಾವಣಗೆರೆ; ನಮ್ಮ ಸರ್ಕಾರದ ತಪ್ಪು ನಿರ್ಧಾರಗಳಿಂದಲೇ ರಾಜ್ಯದಲ್ಲಿ ಬಿಜೆಪಿ ಸೋತಿದೆ ಎಂದು ಮಾಜಿ ಶಾಸಕ ರೇಣುಕಾಚಾರ್ಯ ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಒಳಮೀಸಲಾತಿಗೆ ಕೈಹಾಕಬೇಡಿ ಎಂದರೂ ಮಾಡಿದರು. ಬಡವರಿಗೆ ೧೦ ಕೆಜಿ ಅಕ್ಕಿ ನೀಡುವುದು ಬಿಟ್ಟು ಕಡಿತ ಮಾಡಿ, ಬಡ ಜನರ ಹೊಟ್ಟೆ ಮೇಲೆ ಹೊಡೆದರು ಎಂದರು.

ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಕೂಡಾ ತಪ್ಪು. ಈಶ್ವರಪ್ಪ, ಶೆಟ್ಟರ್‌ಗೆ ಟಿಕೆಟ್‌ ನೀಡದಿದ್ದುದು ಕೂಡಾ ಸೋಲಿಗೆ ಕಾರಣ. ಶೆಟ್ಟರ್‌ಗೇನು ಅಷ್ಟೊಂದು ವಯಸ್ಸಾಗಿತ್ತಾ ಎಂದು ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ. ಇನ್ನು ಇತ್ತೀಚೆಗಷ್ಟೇ ನನ್ನ ಸೋಲಿಗೆ ಡಾ.ಕೆ.ಸುಧಾಕರ್‌ ಕಾರಣ ಎಂದು ಎಂಟಿಬಿ ನಾಗರಾಜ್‌ ಆಕ್ರೋಶ ಹೊರಹಾಕಿದ್ದರು. ಇದೀಗ, ರೇಣುಕಾಚಾರ್ಯ ಕೂಡಾ ಮಾಜಿ ಸಚಿವ ಡಾ.ಕೆ.ಸುಧಾಕರ್‌ ವಿರುದ್ಧ ಕಿಡಿಕಾರಿದ್ದಾರೆ. ಪ್ರಣಾಳಿಕೆ ಸಮಿತಿಗೆ ಸುಧಾಕರ್‌ನನ್ನು ತಂದು ಕೂರಿಸಿದರು. ಸುಧಾಕರ್‌ ಕೆಲಸಕ್ಕೆ ಬಾರದ ಪ್ರಣಾಳಿಕೆ ನೀಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

Share Post