DistrictsPolitics

ನನ್ನ ಇವತ್ತಿನ ಸ್ಥಿತಿಗೆ ಬಿ.ಎಲ್‌.ಸಂತೋಷ್‌ ಕಾರಣ; ಶೆಟ್ಟರ್‌ ಗಂಭೀರ ಆರೋಪ

ಬೆಂಗಳೂರು; ನನಗೆ ಟಿಕೆಟ್‌ ತಪ್ಪಿಸಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.‌ಸಂತೋಷ್‌. ನನ್ನ ಇವತ್ತಿನ ಸ್ಥಿತಿಗೆ ಅವರೇ ಕಾರಣ ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಗಂಭೀರ ಆರೋಪ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು, ಬಿ.ಎಲ್‌.ಸಂತೋಷ್‌ರಿಂದ ನನಗೆ ಬಿಜೆಪಿ ಟಿಕೆಟ್‌ ಕೈತಪ್ಪಿತು ಎಂದು ಆರೋಪಿಸಿದ್ದಾರೆ.

ಸಂತೋಷ್‌ಗೆ ಹಲವರು ಕೈಜೋಡಿಸಿದ್ದಾರೆ. ಒಬ್ಬ ವ್ಯಕ್ತಿಯ ಕಾರಣಕ್ಕಾಗಿ ಬಿ.ಎಲ್.‌ಸಂತೋಷ್‌ ಅವರು ನನಗೆ ಅವಮಾನ ಮಾಡಿದರು. ಮಹೇಶ್‌ ಟೆಂಗಿನಕಾಯಿ ಸಲುವಾಗಿ ಇದೆಲ್ಲಾ ನಡೆಯಿತು. ಬಿಜೆಪಿ ಹೈಕಮಾಂಡ್‌ಗೆ ಬಿ.ಎಲ್‌.ಸಂತೋಷ್‌ ಮುಖ್ಯವಾದರು, ಪಕ್ಷ ಮುಖ್ಯವಾಗಲಿಲ್ಲ. ಕೆಲವೇ ಕೆಲವು ವ್ಯಕ್ತಿಗಳಿಂದ ಬಿಜೆಪಿ ಕಂಟ್ರೋಲ್‌ ಆಗ್ತಿದೆ. ಹುಬ್ಬಳ್ಳಿಯಲ್ಲಿ ಬಿಜೆಪಿಯ ತಳಪಾಯ ಒಡೆದುಹೋಗಿದೆ ಎಂದು ಜಗದೀಶ್‌ ಶೆಟ್ಟರ್‌ ಇದೇ ವೇಳೆ ಹೇಳಿದ್ದಾರೆ.

ಮಹೇಶ್‌ ಟೆಂಗಿನಕಾಯಿಯವರು ಬಿ.ಎಲ್‌.ಸಂತೋಷ್‌ ಅವರ ಮಾನಸ ಪುತ್ರ. ಹೀಗಾಗಿ ಅವರಿಗೆ ಟಿಕೆಟ್‌ ಕೊಡಿಸೋದಕ್ಕಾಗಿ ನನಗೆ ಟಿಕೆಟ್‌ ತಪ್ಪಿಸಿದ್ದಾರೆ. ಸಂತೋಷ್‌ರನ್ನು ನಂಬಿದರೆ ರಾಜ್ಯದಲ್ಲಿ ಬಿಜೆಪಿ ಹಾಳಾಗುತ್ತದೆ ಎಂದು ಶೆಟ್ಟರ್‌ ಆರೋಪಿಸಿದ್ದಾರೆ.

Share Post