BengaluruPolitics

ನುಡಿದಂತೆ ನಾವು ನಡೆದುಕೊಂಡಿದ್ದೇವೆ; ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು; ಕನಕದಾಸರ ನಾಡು, ಶಿಶುನಾಳ ಷರೀಫರ ಭೂಮಿ ಇದು. ನುಡಿದಂತೆ ನಡೆದುಕೊಳ್ಳಬೇಕಿದೆ. ನಾವು ನುಡಿದಂತೆ ನಡೆದುಕೊಳ್ಳುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದೇ ತಿಂಗಳ 11ರಿಂದ ಮಹಿಳೆಯರಿಗೆ ಬಸ್‌ ಪ್ರಯಾಣ ಉಚಿತ ಎಂದು ಹೇಳಿದರು.

ಇನ್ನು ಕೆಲ ಷರತ್ತುಗಳೊಂದಿಗೆ ಮುಂದಿನ ತಿಂಗಳು ವಿದ್ಯುತ್‌ ಉಚಿತ ನೀಡಲಾಗುತ್ತದೆ. ಅನ್ನಭಾಗ್ಯ ಯೋಜನೆಯನ್ನು ಕೂಡಾ ಮುಂದಿನ ತಿಂಗಳಿಂದ ಜಾರಿಗೆ ಬರಲಿದೆ. ಗೃಹಲಕ್ಷ್ಮೀ ಯೋಜನೆಯನ್ನು ಆಗಸ್ಟ್‌ 15ರಿಂದ ಜಾರಿ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Share Post