BengaluruPolitics

ಅಂದು ಸಹಕಾರ ಕೊಟ್ಟಿದ್ದೆ, ಇಂದು ಸಿದ್ದರಾಮಯ್ಯ ಸಹಕಾರ ಕೊಡಲಿ; ಡಿ.ಕೆ.ಶಿವಕುಮಾರ್‌

ತುಮಕೂರು; 2013ರಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗೋದಕ್ಕೆ ನಾನು ಸಹಕಾರ ಕೊಟ್ಟಿದ್ದೆ. ಈಗ ಸಿದ್ದರಾಮಯ್ಯ ನನಗೆ ಸಹಕಾರ ಕೊಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ನೊಣವಿನಕೆರೆಯಲ್ಲಿ ಅಜ್ಜಯ್ಯನ ಗುದ್ದೆಗೆ ಪೂಜೆ ಸಲ್ಲಿಸಿದ ನಂತರ ಅವರು, ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ನನಗೆ ಎಲ್ಲರ ಸಹಕಾರ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ. 

ನಾನು ಅಜ್ಜಯ್ಯನನ್ನು ತುಂಬಾ ನಂಬುತ್ತೇನೆ. ಯಾವುದೇ ಗುರಿ ತಲುಒಬೇಕಾದರೆ ನಮಗೆ ಒಬ್ಬರು ಗುರು ಇರಬೇಕು. ಹೀಗಾಗಿ ನಾನು ಅಜ್ಜಯ್ಯನನ್ನು ನಂಬುತ್ತೇನೆ. ಅಜ್ಜಯ ನಾನು ಕೇಳಿದ್ದನ್ನೆಲ್ಲಾ ಕೊಟ್ಟಿದ್ದಾರೆ. ಚುನಾವಣೆ ಗೆದ್ದ ಮೇಲೆ ಮೊದಲ ಬಾರಿ ಇಲ್ಲಿಗೆ ಬಂದಿದ್ದೇವೆ. ಸಂಜೆ ಶಾಸಕಾಂಗ ಪಕ್ಷದ ಸಭೆ ಇರುವುದರಿಂದ ಅಜ್ಜಯ್ಯನ ಅಶಿರ್ವಾದ ಪಡೆದಿದ್ದೇನೆ. ನನಗೆ ಎಲ್ಲರೂ ಸಹಕಾರ ಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ನಾನು ಯಾರಿಗೆ ಟಿಕೆಟ್‌ ಕೊಡಬೇಕು, ಯಾರಿಗೆ ಕೊಡಬಾರದು ಅನ್ನೋದನ್ನು ಇಲ್ಲಿಯೇ ನಿರ್ಧಾರ ಮಾಡಿದ್ದೆ. ನಾನು ಅಜ್ಜಯ್ಯನ ಅಣತಿಯಂತೆ ನಡೆದಿದ್ದಾರೆ. ನನಗೆ ಬಯಸಿದ್ದೆಲ್ಲವೂ ದಕ್ಕಿದೆ. ಈಗಲೂ ಅದೇ ಆಗುತ್ತದೆ ಎಂಬ ನಂಬಿಕೆ ಇದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Share Post