DistrictsPolitics

ನನ್ನ ಸೋಲಿಗೆ ಕಾರಣವಾದವರಿಗೆ ಪಾಠ ಕಲಿಸಿ : ದೇವೆಗೌಡ

ಮಧುಗಿರಿ : ʼಕಳೆದ ಲೋಕಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾದವರಿಗೆ ವಿಧಾನ ಪರಿಷತ್‌ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕುʼ ಎಂದು ಜೆಡಿಎಸ್‌ ವರಿಷ್ಠ ದೇವೇಗೌಡ ಶುಕ್ರವಾರ ಮನವಿ ಮಾಡಿದ್ದಾರೆ.

ಜೆ.ಡಿ.ಎಸ್‌ ಅಭ್ಯರ್ಥಿ ಆರ್‌ ಅನಿಲ್‌ ಕುಮಾರ್‌ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಾದ ʼಜನತಾ ಸಂಗಮʼ ಸಮಾವೇಶದಲ್ಲಿ ಮಾತನಾಡಿ, ʼನನಗೆ ಆಗಿರುವ ನೋವು ಸರಿಪಡಿಸಲು ನಿಮಗೆ ಇದೊಂದು ಅವಕಾಶ ಸಿಕ್ಕಿದೆʼ ಎಂದರು.

ಇದು ನನ್ನ ಕೊನೆಯ ಚುನಾವಣೆಯ ಪ್ರಚಾರ. ಮುಂಚೆ ಬರುತ್ತೇನೋ, ಇಲ್ಲವೋ ಗೊತ್ತಿಲ್ಲ. ಯಾವ ಜನ ನನ್ನ ಕೈಬಿಟ್ಟಿದಾರೆಯೋ ಅವರೇ ನನ್ನನ್ನು ಎತ್ತಿಕೊಂಡು ಬರುತ್ತಾರೆ. ಪ್ರಾದೇಶಿಕ ಪಕ್ಷ ಉಳಿಸಿʼ ಎಂದರು.

 

Share Post