DistrictsPolitics

ನಿನ್ನ ಪ್ರೀತಿಯಿಂದ ಬಡ್ಡಿ ಸಮೇತ ತೀರುಸುತ್ತೇನೆ; ಪ್ರಧಾನಿ ನರೇಂದ್ರ ಮೋದಿ

ಶಿವಮೊಗ್ಗ; ನಾನು ರಾಜ್ಯದ ಬಹುತೇಕ ಭಾಗವನ್ನು ಸುತ್ತಿದ್ದೇನೆ. ಎಲ್ಲಾ ಕಡೆ ಕನ್ನಡಿಗರ ಅಪಾರ ಪ್ರೀತಿ ತೋರಿಸಿದ್ದಾರೆ. ಕರ್ನಾಟವನ್ನು ಅಭಿವೃದ್ಧಿ ಮಾಡುವ ಮೂಲಕ ನಿಮ್ಮ ಪ್ರೀತಿಯನ್ನು ನಾನು ಬಡ್ಡಿ ಸಮೇತ ತೀರಿಸುತ್ತೇನೆ ಎಂದು ಪ್ರಧಾನಿ ನರೆಂದ್ರ ಮೋದಿ ಹೇಳಿದ್ದಾರೆ. ಆಯನೂರಿನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮೋದಿಯವರು, ಯಡಿಯೂರಪ್ಪ ಅವರ ನೆಲದಿಂದ ರಾಜ್ಯದ ಜನರಿಗೆ ಅಸಲಿ ಗ್ಯಾರಂಟಿ ನೀಡುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್‌ ಬರೀ ಸುಳ್ಳು ಗ್ಯಾರೆಂಟಿಗಳನ್ನು ನೀಡುತ್ತಿದೆ. ಅವು ಈಡೇರುವುದಿಲ್ಲ. ಆದ್ರೆ ಬಿಜೆಪಿ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ನಂಬರ್‌ ವನ್‌ ಮಾಡುತ್ತೇನೆ ಎಂದು ಮೋದಿ ಹೇಳಿದರು. ಒಂದು ಬಲೂನ್‌ಗೆ ಸುಳ್ಳು ಗಾಳಿ ತುಂಬಿಸಿ ಹಾರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ವಿರುದ್ಧ ಮೋದಿ ಹರಿಹಾಯ್ದಿದ್ದಾರೆ. ಈ ಬಲೂನ್‌ ಒಡೆದುಹೋಗುತ್ತದೆ. ಅವರ ಕನಸುಗಳು ನುಚ್ಚುನೂರಾಗುತ್ತವೆ ಎಂದೂ ಮೋದಿ ಹೇಳಿದ್ದಾರೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬರಬಾರದು. ಬಂದರೆ ರಾಜ್ಯ ಮತ್ತೆ ರಿವರ್ಸ್‌ ಗೇರ್‌ನಲ್ಲಿ ಹೋಗುತ್ತದೆ. ರಾಜ್ಯ ಮುನ್ನಡೆಯಬೇಕು ಅಂದರೆ ಬಿಜೆಪಿಗೆ ಮತ ಹಾಕಬೇಕು ಎಂದು ಮೋದಿ ಹೇಳಿದರು.

Share Post