DistrictsPolitics

ಹನುಮಂತನ ಸುದ್ದಿಗೆ ಬಂದಿದ್ದಕ್ಕೆ ಹೆಲಿಕಾಪ್ಟರ್‌ ಗಾಜು ಪುಡಿಪುಡಿ; ಯತ್ನಾಳ್‌

ಕೊಪ್ಪಳ; ಹನುಮಂತನ ಸುದ್ದಿಗೆ ಬಂದಿರಿ ನೀವು, ಅದಕ್ಕೇ ಹೆಲಿಕಾಪ್ಟರ್​ ಗಾಜು ಪುಡಿಪುಡಿಯಾಗಿದೆ. ಇನ್ನೂ ಮುಂದುವರೆದರೆ ಡಿ.ಕೆ.ಶಿವಕುಮಾರ್ ನಿಮ್ಮ ಪತನವೂ ಗ್ಯಾರೆಂಟಿ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಬೆಂಕಿಯುಗುಳಿದಿದ್ದಾರೆ.
ಕೊಪ್ಪಳದ ಗಂಗಾವತಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಅವರು ಮಾತನಾಡಿದರು. ಡಿ.ಕೆ.ಶಿವಕುಮಾರ್ ಅವರು ಮತ್ತೊಂದು ಜನ್ಮ ಎತ್ತಿಬಂದರೂ ಬಜರಂಗದಳವನ್ನು ಬ್ಯಾನ್ ಮಾಡೋಕೆ ಆಗಲ್ಲ ಎಂದು ಯತ್ನಾಳ್‌ ಹೇಳಿದರು. ಬಜರಂಗದಳದ ಕಾರ್ಯಕರ್ತರು ಭಯೋತ್ಪಾದಕರಲ್ಲ, ಎಂದಿಗೂ ಅವರು ದೇಶ ವಿರೋಧಿ ಚಟುವಟಿಕೆ ಮಾಡಲ್ಲ ಎಂದರು.

 

Share Post