BengaluruCinema

ಮಗನ ಚಿತ್ರಕ್ಕೆ ಮುಧೋಳ ಎಂದು ಹೆಸರಿಟ್ಟ ರವಿಚಂದ್ರನ್; ಏನಿದರ ವಿಶೇಷ..?

ಬೆಂಗಳೂರು; ರವಿಚಂದ್ರನ್‌ ಅವರ ಪುತ್ರ ವಿಕ್ರಮ್‌ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿದ್ದು, ಆ ಚಿತ್ರಕ್ಕೆ ಮುಧೋಳ ಎಂದು ರವಿಚಂದ್ರನ್‌ ನಾಮಕರಣ ಮಾಡಿದ್ದಾರೆ. ನಿನ್ನೆ ಈ ಚಿತ್ರ ಟೈಟಲ್‌ ಲಾಂಚ್‌ ಮಾಡಲಾಗಿದ್ದು, ಈ ಟೈಟಲ್‌ ಅನ್ನು ರವಿಚಂದ್ರನ್‌ ಅವರೇ ಸೂಚಿಸಿದರು ಎಂದು ಚಿತ್ರತಂಡ ಹೇಳಿಕೊಂಡಿದೆ.

ಅಂದಹಾಗೆ, ಚಿತ್ರದಲ್ಲಿ ಹೀರೋ ಹೆಸರು ಮುಧೋಳ ಅಂತೆ. ಜೊತೆ ಉತ್ತರ ಕರ್ನಾಟಕದಲ್ಲಿ ಮುಧೋಳ ಎಂಬ ಊರಿದ್ದು, ಆ ಹೆಸರಿನ ನಾಯಿಗಳು ಫೇಮಸ್‌.. ಈ ಕಾರಣಕ್ಕೆ ಮುಧೋಳ ಎಂಬ ಹೆಸರು ಹೆಚ್ಚು ಜನರನ್ನು ಆಕರ್ಷಿಸುತ್ತೆ ಎಂದು ರವಿಚಂದ್ರನ್‌ ಹೇಳಿದರಂತೆ. ಹೀಗಾಗಿ ಚಿತ್ರತಂಡ ಮುಧೋಳ ಎಂದೇ ಹೆಸರು ನಾಮಕರಣ ಮಾಡಿದೆ.

ಈ ಚಿತ್ರವನ್ನು ಕಾರ್ತೀಕ್‌ ರಾಜನ್‌ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಬಗ್ಗೆ ಅವರು ಮಾತನಾಡಿದ್ದು, ಮುಧೋಳ ನಾಯಿಗಾಗಿ ಹಲವಾರು ಕಡೆ ಹುಡುಕಾಡಿದೆವು. ತ್ಯಾಗರಾಜ್ ಅನ್ನೋರು ಆ ಶ್ವಾನ ಟ್ರೈನ್ ಮಾಡಿದ್ದಾರೆ ಅನ್ನೋದು ಗೊತ್ತಾಯ್ತು. ಟೈಟಲ್ ಟೀಸರ್ ನಲ್ಲಿ ಶ್ವಾನ ಚಾಕು ಕಚ್ಚಿಕೊಂಡು ಬರುವ ದೃಶ್ಯಕ್ಕಾಗಿ 23 ಟೇಕ್ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

Share Post