DistrictsPolitics

ಅಶೋಕ್‌ ಭಾಷಣಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್‌ ಕಾರ್ಯಕರ್ತ

ಕನಕಪುರ; ಕನಕಪುರದಲ್ಲಿ ಡಿ.ಕೆ.ಶಿವಕುಮಾರ್‌ ವಿರುದ್ಧ ಕಣಕ್ಕಿಳಿದಿರುವ ಆರ್‌.ಅಶೋಕ್‌ ಅವರು ಇಂದು ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು. ಈ ವೇಳೆ ಆರ್‌.ಅಶೋಕ್‌ ಭಾಷಣಕ್ಕೆ ವ್ಯಕ್ತಿಯೊಬ್ಬ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.

   ಟಿ.ಬೇಕುಪ್ಪೆ ಸರ್ಕಲ್‌ನಲ್ಲಿ ಆರ್‌.ಅಶೋಕ್‌ ಭಾಷಣ ಮಾಡುತ್ತಿದ್ದರು. ಈ ವೇಳೆ ಆರ್‌.ಅಶೋಕ್‌ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್‌ ಕಾರ್ಯಕರ್ತ, ಆಕ್ರೋಶ ಹೊರಹಾಕಿದ್ದಾನೆ.

ಕನಕಪುರ ಕಾಂಗ್ರೆಸ್‌ ಮನೆ ಇದ್ದಂತೆ. ಇಲ್ಲಿ ಬಂದು ನೀವು ಡಿ.ಕೆ.ಶಿವಕುಮಾರ್‌ ಬಗ್ಗೆ ಯಾಕೆ ಮಾತನಾಡುತ್ತೀರಿ ಎಂದು ಪ್ರಶ್ನಿಸಿದ್ದಾನೆ. ಕನಕಪುರಕ್ಕೆ ಮುಂಜೂರಾಗಿದ್ದ ಮೆಡಿಕಲ್‌ ಕಾಲೇಜನ್ನು ನೀವು ಕಿತ್ತುಕೊಂಡಿರಿ, ಸಂವಿಧಾನ ಬದಲಿಸುತ್ತೇವೆ ಎಂದು ಹೇಳುತ್ತೀರಿ ಎಂದು ಕಿಡಿಕಾರಿದ್ದಾನೆ.

Share Post