DistrictsPolitics

ಸೋಮಣ್ಣ ಸ್ಪರ್ಧೆಗೆ ಬಿ.ಎಲ್‌.ಸಂತೋಷ್‌ ಒತ್ತಡ ಕಾರಣ; ಸಿದ್ದರಾಮಯ್ಯ

ಮೈಸೂರು; ವರುಣಾದಲ್ಲಿ ಸಚಿವ ವಿ.ಸೋಮಣ್ಣ ಹರಕೆಯ ಕುರಿಯಾಗಿದ್ದಾರೆ. ವಿ.ಸೋಮಣ್ಣ ವರುಣಾದಲ್ಲಿ ಸ್ಪರ್ಧೆ ಮಾಡೋದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಕಾರಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸೋಮಣ್ಣನನ್ನು ಹರಕೆಯ ಕುರಿ ಮಾಡಲಾಗಿದೆ ಎಂದು ಲೇವಡಿ ಮಾಡಿದ್ದಾರೆ.

ದುಡ್ಡಿರುವ ಒಬ್ಬ ವ್ಯಕ್ತಿ ಬೇಕು ಅಂತ ಸೋಮಣ್ಣನನ್ನು ಇಲ್ಲಿ ಹಾಕಿದ್ದಾರೆ. ವರುಣಾ ಬಗ್ಗೆ ಸೋಮಣ್ಣಗೆ ಏನು ಗೊತ್ತು..? ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಸೋಮಣ್ಣ ಹೊರಜಿಲ್ಲೆಯವನು, ವರುಣಾಗೂ ಸೋಮಣ್ಣನಿಗೂ ಏನು ಸಂಬಂಧ ಎಂದು ಪ್ರಶ್ನೆ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿಯಾಗಿ ಒಂದು ಮನೆ ಕಟ್ಟಿಕೊಡಲಿಲ್ಲ ಎಂದು ಸಿದ್ದರಾಮಯ್ಯ, ನನ್ನ ಹಾಗೂ ವರುಣಾ ಸಂಬಂಧ ಕಿತ್ತುಹಾಕಲು ಸಾಧ್ಯವಿಲ್ಲ ಎಂದು ಹೇಳಿದರು. ಇನ್ನು ಜೆಡಿಎಸ್‌-ಬಿಜೆಪಿ ಒಳಒಪ್ಪಂದ ಬಗ್ಗೆ ಶೀಘ್ರದಲ್ಲೇ ಹೇಳುತ್ತೇನೆ ಎಂದು ಬಾಂಬ್‌ ಸಿಡಿಸಿದರು.

Share Post