BengaluruPolitics

ನಮಗೇ ಅಧಿಕಾರ ಸಿಗುತ್ತೆ, ಕಾಂಗ್ರೆಸ್‌ದು ತಿರುಕನ ಕನಸು; ಬಿಎಸ್‌ವೈ

ಬೆಂಗಳೂರು; ಈ ಬಾರಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಸುಮ್ಮನೆ ಕಾಂಗ್ರೆಸ್‌ ನಾಯಕರು ಸಿಎಂ ಆಗುವ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದ ಜನರು ಬಿಜೆಪಿ ಹಾಗೂ ಪ್ರಧಾನಿ ಮೋದಿಯವರ ಮೇಲೆ ವಿಶ್ವಾಸವಿಟ್ಟಿದ್ದಾರೆ. ಈ ಬಾರಿಯೂ ನಾವೇ ಅಧಿಕಾರಕ್ಕೆ ಬರೋದು ನಿಶ್ಚಿತ ಎಂದು ಹೇಳಿದರು.

ನಾವು ನಾಲ್ಕು ತಂಡಗಳಾಗಿ ವಿಜಯ ಸಂಖಲ್ಪ ಯಾತ್ರೆ ಮಾಡಿದ್ದೇವೆ. ಇದರಿಂದಾಗಿ ಕಾಂಗ್ರೆಸ್‌ಗೆ ಭಯ ಶುರುವಾಗಿದೆ. ಮೋದಿ ಎದುರು ರಾಹುಲ್‌ ಗಾಂಧಿ ಸಮಾನರಾಗೋಕೆ ಸಾಧ್ಯವೇ ಇಲ್ಲ ಎಂದು ಯಡಿಯೂರಪ್ಪ ಇದೇ ವೇಳೆ ಹೇಳಿದರು. ಶೀಘ್ರದಲ್ಲೇ ವರಿಷ್ಠರು ಅಭ್ಯರ್ಥಿಗಳು ಯಾರೆಂದು ತಿಳಿಸುತ್ತಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೋದು ಸೂರ್ಯ, ಚಂದ್ರರಷ್ಟೇ ಸತ್ಯ ಎಂದು ಯಡಿಯೂರಪ್ಪ ಇದೇ ವೇಳೆ ತಿಳಿಸಿದರು.

Share Post