CrimeDistricts

ದೀರ್ಘದಂಡ ನಮಸ್ಕಾರದ ವೇಳೆ ಅವಘಡ; ಕಾರು ಹತ್ತಿ ಯುವತಿ ಸಾವು

ಚಿಕ್ಕೋಡಿ; ದೀರ್ಘ ದಂಡ ನಮಸ್ಕಾರ ಮಾಡುತ್ತಿದ್ದ ವೇಲೆ ಕಾರು ಹತ್ತಿ ಯುವತಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆ ಅಥಣಿ ಬಳಿಯ ತೀರ್ಥ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಐಶ್ವರ್ಯಾ ನಾಯಿಕ ಎಂಬಾಕೆಯೇ ಸಾವನ್ನಪ್ಪಿರುವ ಯುವತಿ.

ತೀರ್ಥ ಗ್ರಾಮದಲ್ಲಿ ಜಾತ್ರೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಐಶ್ವರ್ಯಾ ನಾಯಿಕ ಕೃಷ್ಣಾ ನದಿಯಿಂದ  ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಸಲ್ಲಿಸುತ್ತಿದ್ದರು. ಈ ವೇಳೆ ಕಾರೊಂದು ಆಕೆಯ ಮೇಲೆ ಹರಿದಿದೆ.

ತಲೆಯ ಮೇಲೆಯೇ ಕಾರಿನ ಚಕ್ರ ಹರಿದಿದ್ದರಿಂದ ಐಶ್ವರ್ಯಾ ನಾಯಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ಘಟನೆ ಸಂಬಂಧ ಕಾರು ಚಾಲಕನನ್ನು ಬಂಧಿಲಾಗಿದೆ.

Share Post