BengaluruCinema

ನಾಳೆ ಕಬ್ಜ ರಿಲೀಸ್‌; ತಿಮ್ಮಪ್ಪನ ದರ್ಶನ ಪಡೆದ ಚಿತ್ರತಂಡ

ಬೆಂಗಳೂರು; ನಾಳೆ ಕಬ್ಜ ಸಿನಿಮಾ ರಿಲೀಸ್‌ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ತಿರುಪತಿ ತಿಮ್ಮಪ್ಪ ದರ್ಶನ ಪಡೆದಿದೆ. ವಿಶೇಷ ವಿಮಾನದಲ್ಲಿ ಚಿತ್ರ ತಂಡ ತೆರಳಿ ತಿಮ್ಮಪ್ಪನ ದರ್ಶನ ಪಡೆದು, ಚಿತ್ರದ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದೆ.

ನಿರ್ದೇಶಕ ಆರ್‌.ಚಂದ್ರು, ಉಪೇಂದ್ರ ಸೇರಿದಂತ ಹಲವರು ತಿರುಪತಿಗೆ ಭೇಟಿ ನೀಡಿಬಂದಿದ್ದಾರೆ. ಐದು ಭಾಷೆಗಳಲ್ಲಿ ಸಿನಿಮಾ ಸಿದ್ಧವಾಗಿದ್ದು, ವಿಶ್ವದಾದ್ಯಂತ ನಾಲ್ಕು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.

Share Post