CrimeDistricts

ಕೃಷಿ ಹೊಂಡದಲ್ಲಿ ಜಾರಿಬಿದ್ದು ತಾಯಿ, ಮಗ ದಾರುಣ ಸಾವು

ಚಿಕ್ಕಬಳ್ಳಾಪುರ; ಕೃಷಿ ಹೊಂಡದಲ್ಲಿ ಜಾರಿ ಬಿದ್ದಿದ್ದ ಮಗನನ್ನು ರಕ್ಷಿಸಲು ಹೋದ ತಾಯಿ, ಮಗನೊಂದಿಗೆ ಇಹಲೋಕ ತ್ಯಜಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಕೋಳೂರು ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.

ಕೋಳೂರು ಗ್ರಾಮದ ರೂಪಾ (35) ಹಾಗೂ ಅವರ ಮಗ ಹೇಮಂತ್ (9) ನೀರುಪಾಲಾದವರು. ಒಂಬತ್ತು ವರ್ಷದ ಬಾಲಕ ತಾಯಿ ಹಾಗೂ ಅಜ್ಜಿ ಜೊತೆ ಕುರಿ ಕಾಯಲು ಹೋಗಿದ್ದ. ಈ ವೇಳೆ ಆತ ಕೃಷಿ ಹೊಂಡದಲ್ಲಿ ಕೈಕಾಲು ತೊಳೆಯಲು ಹೋಗಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ನೀರಿಗೆ ಜಾರಿಬಿದ್ದಿದ್ದಾನೆ.

ಇದನ್ನು ನೋಡಿದ ತಾಯಿ ರೂಪಾ ಕೂಡಲೇ ಓಡಿಬಂದಿದ್ದಾರೆ. ಮಗನನ್ನು ರಕ್ಷಿಸಲು ಹೋಗಿ ಅವರೂ ಮುಳುಗಿದ್ದಾರೆ. ಇದನ್ನು ನೋಡಿದ ಅಜ್ಜಿ ಕೂಡಾ ನೀರಿಗಿಳಿದಿದ್ದು, ಅವರೂ ಮುಳುಹೋ ಹಂತದಲ್ಲಿದ್ದರು. ಆದ್ರೆ ಅಷ್ಟರಲ್ಲಿ ಸ್ಥಳಕ್ಕೆ ಬಂದ ಬಾಲಕಿಯೊಬ್ಬಳು, ಡ್ರಿಪ್‌ ಪೈಪ್‌ ಎಸೆದು ಅಜ್ಜಿಯನ್ನು ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾಳೆ.

Share Post