BengaluruEconomyPolitics

ಡಿಕೆಶಿ ಕಿವಿ ಮೇಲಿದ್ದ ಹೂವನ್ನು ತೆಗೆದ ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸರ್ಕಾರವನ್ನು ಲೇವಡಿ ಮಾಡಲು ಎರಡೂ ಕಿವಿ ಮೇಲೆ ಹೂ ಇಟ್ಟುಕೊಂಡುಬಂದಿದ್ದರು. ಇದರಲ್ಲಿ ಒಂದು ಕಿವಿ ಮೇಲಿದ್ದ ಹೂವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತೆಗೆದ ಪ್ರಸಂಗ ವಿಧಾನಸೌಧದ ಆವರಣದಲ್ಲಿ ನಡೆಯಿತು.

ಬಜೆಟ್‌ ಮಂಡನೆ ಮುಗಿದ ನಂತರ ವಿಧಾನಸೌಧದ ಆವರಣದಲ್ಲಿ ಡಿ.ಕೆ.ಶಿವಕುಮಾರ್‌ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಯಡಿಯೂರಪ್ಪ ಎದುರಿಗೆ ಸಿಕ್ಕಿದ್ದಾರೆ. ಡಿಕೆಶಿ ಕಿವಿ ಮೇಲೆ ಹೂವಿರುವುದನ್ನು ನೋಡಿದ ಬಿಎಸ್‌ವೈ, ನಕ್ಕು ಒಂದು ಕಿವಿ ಮೇಲಿದ್ದ ಹೂವನ್ನು ತೆಗೆದಿದ್ದಾರೆ. ನಂತರ ಅದನ್ನು ಪಕ್ಕದಲ್ಲಿದ್ದವರ ಕೈಗೆ ಕೊಟ್ಟು ಮುಂದೆ ಸಾಗಿದ್ದಾರೆ.

ಯಡಿಯೂರಪ್ಪ ಅವರು ಹೂವು ತೆಗೆದರು. ಆಗ ನೋಡಿ ನಕ್ಕ ಡಿಕೆಶಿ, ಮತ್ತೆ ಹೂವನ್ನು ಕಿವಿಗಿಟ್ಟುಕೊಂಡು ನಡೆದರು.

Share Post