CrimeDistricts

13 ಚೀಲ ಸೊಸೈಟಿ ಅಕ್ಕಿ ತಿಂದು ತೇಗಿರುವ ಕಾಡಾನೆ

ಹಾಸನ; ರೇಡಿಯೋ ಕಾಲರ್‌ ಅಳವಡಿಸಿದ್ದ ಕಾಡಾನೆಯೊಂದು ಗ್ರಾಮಕ್ಕೆ ನುಗ್ಗಿ 13 ಚೀಲ ಸೊಸೈಟಿ ಅಕ್ಕಿ ತಿಂದು ತೇಗಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಅರೇಹಳ್ಳಿ ಬಳಿಯ ಅನುಘಟ್ಟದಲ್ಲಿ ನಡೆದಿದೆ. ರಾತ್ರಿ ಗ್ರಾಮಕ್ಕೆ ಬಂದಿರುವ ಕಾಡಾನೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎರಡು ಬಾಗಿಲನ್ನು ಒಡೆದು ಅಕ್ಕಿ ತಿಂದಿದೆ.

ಸೋಮವಾರ ಸೊಸೈಟಿಗೆ ಅಕ್ಕಿ ಲೋಡ್ ಬಂದಿದ್ದು, ಜನರಿಗೆ ವಿತರಣೆ ಮಾಡಬೇಕಿತ್ತು. ಈ ನಡುವೆ ಆನೆ ಬಂದು ಅಕ್ಕಿ ತಿಂದುಹೋಗಿದೆ. ಇಂದು ಬೆಳಗ್ಗೆ ಸೊಸೈಟಿ ಸೆಕ್ರೆಟರಿ ಸತೀಶ್ ಎಂಬವರು ಅಕ್ಕಿ ವಿತರಣೆಗೆ ಬಂದ ವೇಳೆ ಸೊಸೈಟಿ ಬಾಗಿಲು ಮುರಿದಿರುವುದು ಪತ್ತೆಯಾಗಿದೆ. ಕಳ್ಳತನವಾಗಿರಬಹುದೆಂದು ತಿಳಿದು ಸಿಸಿಟಿವಿ ಪರಿಶೀಲಿಸಿದ್ದಾರೆ. ಆಗ ಇದು ಆನೆ ಮಾಡಿರುವ ಉಪಟಳ ಅನ್ನೋದು ಗೊತ್ತಾಗಿದೆ. ಹತ್ತು ತಿಂಗಳ ಹಿಂದೆ ಇದೇ ಕಾಡಾನೆ ಇದೇ ಸೊಸೈಟಿ ಬಾಗಿಲು ಮುರಿದು ನಾಲ್ಕು ಕ್ವಿಂಟಾಲ್ ಅಕ್ಕಿ ತಿಂದಿತ್ತು ಎಂದು ತಿಳಿದುಬಂದಿದೆ.

Share Post