CrimeDistricts

ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ

ಚಾಮರಾಜನಗರ;ಯಳಂದೂರು ಸಮೀಪದ ವೈ.ಕೆ. ಮೊಳೆ ಗ್ರಾಮದಲ್ಲಿ ಅನುಮಾನಸ್ಪದವಾಗಿ ದನದ ಕೊಟ್ಡಿಗೆ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ

ಕೂಲಿ ಕಾರ್ಮಿಕ ರೈತ ಸಿದ್ದಶೆಟ್ಟಿ ಎಂಬುವವರಿಗೆ ಸೇರಿದ ಜೋಡೆತ್ತುಗಳು ಅರೆಬರೆ ಬೆಂಕಿಯಲ್ಲಿ ಬೆಂದುಹೋಗಿರುವ ಸ್ಥಿತಯಲ್ಲಿರುವ ದೃಶ್ಯ ಎಲ್ಲರ ಮನಕಲಕುವಂತಿತ್ತು.

ಮನೆಯ ಪಕ್ಕದಲ್ಲಿರುವ ಹುಲ್ಲಿನ ಮೆದೆಗೆ ಬೆಂಕಿ ತಗುಲಿ ನಂತರ ದನದ ಕೊಟ್ಟಿಗೆ ಸಂಪೂರ್ಣ ಸುಟ್ಟು ಕರಕಲಾದ ಪರಿಣಾಮ ಮೂಕ ಪ್ರಾಣಿಗಳೆರಡು ಬೆಂಕಿಯ ಜ್ವಾಲೆಗೆ ಸಿಲುಕಿ ಪ್ರಾಣಬಿಟ್ಟಿವೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.ಸಂತ್ರಸ್ಥ ರೈತ ಕುಟುಂಬ ಪರಿಹಾರಕ್ಕಾಗಿ ಅಂಗಲಾಚಿದ್ದಾರೆ.

Share Post