CrimeNational

ಹವಾಲಾ ದಂಧೆ ಬಯಲು; 1.27 ಕೋಟಿ ರೂಪಾಯಿ ವಶ

ಹೈದರಾಬಾದ್; ಹವಾಲಾ ದಂಧೆ ನಡೆಸುತ್ತಿದ್ದ ಮೂವರನ್ನು ಬಂಧಿಸಿರುವ ಹೈದರಾಬಾದ್‌ ಪೊಲೀಸರು, ಅವರಿಂದ 1.27 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದಾರೆ. ನಾರಾಯಣಗುಡ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ದಾಳಿ ನಡೆಸಲಾಗಿದೆ.

ಮನ್ನೆ ಶ್ರೀನಿವಾಸ್‌ ಹಾಗೂ ವಿಶ್ವನಾಥ್‌ ಚೆಟ್ಟಿ, ಫಣಿಕುಮಾರ್‌ ರಾಜು ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಮೂವರೂ ಹೈದರಾಬಾದ್‌ನವರಾಗಿದ್ದಾರೆ. ಬಂಧಿತರಿಂದ 1.27 ಕೋಟಿ ರೂಪಾಯಿ ಹವಾಲಾ ಹಣ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಮಿಷನರ್ ಕಾರ್ಯಪಡೆ, ಕೇಂದ್ರ ವಲಯ ತಂಡದ ಸಬ್ ಇನ್ಸ್‍ಪೆಕ್ಟರ್ ಸಾಯಿ ಕಿರಣ್ ಮತ್ತು ಅವರ ತಂಡ ಹಿಮಾಯತ್ ನಗರದ ಲಿಬರ್ಟಿ ಎಕ್ಸ್ ರಸ್ತೆಯ ರೇಮಂಡ್ ಶೋರೂಂ ಬಳಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

Share Post