DistrictsLifestylePolitics

ಗಿಳಿ ಶಾಸ್ತ್ರ ಕೇಳಿದ ಸಿ.ಟಿ.ರವಿ; ರಾಜಕೀಯ ಭವಿಷ್ಯ ಹೇಗಿದೆ ಗೊತ್ತಾ..?

ಹಾಸನ; ಇಂದು ಹಾಸನಾಂಬೆಯ ದರ್ಶನ ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಇಂದು ಕುಟುಂಬ ಸಮೇತರಾಗಿ ದೇವರ ದರ್ಶನ ಪಡೆದರು. ಈ ವೇಳೆ ಅವರು ಗಿಳಿ ಶಾಸ್ತ್ರ ಕೇಳಿದ್ದಾರೆ. ರಸ್ತೆ ಬದಿ ಗಿಳಿ ಶಾಸ್ತ್ರ ಹೇಳುತ್ತಿದ್ದವನ ಬಳಿ ಬಂದ ಸಿ.ಟಿ.ರವಿ ಅವನ ಪೂರ್ವಾಪರ ವಿಚಾರಿಸಿದರು. ಅನಂತರ ಆತನ ಬಳಿ ಭವಿಷ್ಯ ಕೇಳಿದರು.

ಈ ವೇಳೆ ಗಿಳಿ ಶಾಸ್ತ್ರ ಹೇಳುವವನು ನಿಮ್ಮ ಕೈ ರೇಖೆ ಚೆನ್ನಾಗಿದೆ ಎಂದು ಸಿ.ಟಿ.ರವಿಗೆ ಹೇಳಿದ್ದಾರೆ. ಅನ್ನ, ಬಟ್ಟೆಗೆ ಯಾವುದೇ ತೊಂದರೆಯಾಗುವುದಿಲ್ಲ. ಎಲ್ಲವೂ ಒಳ್ಳೆಯದಾಗುತ್ತದೆ. ಆದ್ರೆ ಆರೋಗ್ಯ ಹಾಗೂ ನೀವು ಮಾಡುವ ಕೆಲಸದ ಮೇಲೆ ಹೆಚ್ಚು ಜಾಗ್ರತೆ ವಹಿಸಬೇಕು ಎಂದು ಹೇಳಿದ್ದಾನೆ. ತಿಥಿ ಊಟಕ್ಕೆ ಹೋಗಬೇಡಿ ಎಂದೂ ಸಿ.ಟಿ.ರವಿಗೆ ಸಲಹೆ ನೀಡಿದ್ದಾನೆ ಎಂದು ತಿಳಿದುಬಂದಿದೆ.

Share Post