Districts

ಒಡೆದ ಕೆರೆ ಕಟ್ಟೆ; ಗ್ರಾಮಸ್ಥರಲ್ಲಿ ಆತಂಕ

ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಇದ್ರಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಕಳೆದ ರಾತ್ರಿ ಗೌರಿಬಿದನೂರು ತಾಲ್ಲೂಕಿನ ಕೆಂಕೆರೆ ಗ್ರಾಮದ ಕೆರೆಯ ಕಟ್ಟೆ ಒಡೆದಿದೆ. ಇದ್ರಿಂದಾಗಿ ನೀರೆಲ್ಲಾ ವ್ಯರ್ಥವಾಗಿ ಹರಿದಿದೆ.

ಕಟ್ಟೆ ಒಡೆದಿದ್ರಿಂದ ನೂರಾರು ಎಕರೆ ಬೆಳೆ ನಾಶವಾಗಿದೆ. ಕೆಂಕೆರೆ ಕೆರೆ ಸುಮಾರು 200 ಎಕರೆ ವಿಶಾಲವಾಗಿದೆ. 22 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕೆರೆ ತುಂಬಿತ್ತು.  ತಡರಾತ್ರಿ ಕಟ್ಟೆಯ ಮಧ್ಯಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ನಂತರ ಅದು ಒಡೆದಿದ್ದು, ಅಪಾತ ಪ್ರಮಾಣದ ನೀರು ಬೆಳೆಗಳಿಗೆ ನುಗ್ಗಿದೆ.

 

Share Post