CrimeNational

ಏತ ನೀರಾವರಿ ಯೋಜನೆ ವೇಳೆ ದುರಂತ; ಐವರು ಕಾರ್ಮಿಕರ ದುರ್ಮರಣ

ಹೈದರಾಬಾದ್​​; ತೆಲಂಗಾಣದಲ್ಲಿ ಏತ ನೀರಾವರಿ ಯೋಜನೆ ಕಾಮಗಾರಿ ವೇಳೆ ಭೀಕರ ದುರಂತ ಸಂಭವಿಸಿದೆ. ನಾಗರ ಕರ್ನೂಲು ಜಿಲ್ಲೆಯ ಪಾಲಮುರು ಏತನೀರಾವರಿ ಕಾಮಗಾರಿ ನಡೆಯುತ್ತಿದೆ. ಈ ವೇಳೆ ಇಂದು ಬೆಳಗ್ಗೆ ಕಾರ್ಮಿಕರು ಕ್ರೇನ್‌ ಮೂಲಕ ಪಂಪ್‌ಹೌಸ್‌ಗೆ ಇಳಿಯುವಾಗ ತಂತಿ ತುಂಡಾಗಿದೆ. ಇದರಿಂದಾಗಿ ಐವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

   ಘಟನೆಯಲ್ಲಿ ಒಬ್ಬರಿಗೆ ಗಂಭೀರ ಗಾಯವಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತೆಲಂಗಾಣ ಸರ್ಕಾರ ಕೃಷ್ಣಾ ನದಿಗೆ ನಿರ್ಮಿಸುತ್ತಿರುವ ಪಾಲಮುರು ಲಿಫ್ಟಿಂಗ್ ಯೋಜನೆಯ ಕಾಮಗಾರಿ ನಾಗರ ‌ಕರ್ನೂಲ್ ಜಿಲ್ಲೆಯ ಕೊಲ್ಹಾಪುರ ಮಂಡಲದ ರೆಗುಮಾನ ಗಡ್ಡಾದಲ್ಲಿ ನಡೆಯುತ್ತಿದೆ. ನಿರ್ಮಾಣ ಹಂತದಲ್ಲಿದ್ದ ಪಾಲಮುರು ರಂಗಾರೆಡ್ಡಿ ಪ್ಯಾಕೇಜ್-1ರಲ್ಲಿ ಈ ಅನಾಹುತ ಘಟಿಸಿದೆ. ಮೃತರನ್ನು ಬಿಹಾರ ಮೂಲದ ಕಾರ್ಮಿಕರು ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಹೈದರಾಬಾದ್‌ನ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share Post