CrimeDistricts

ಮಾಜಿ ಪ್ರೇಯಸಿ ರುಂಡ ಕತ್ತರಿಸಿ ತಂದ ಪಾಗಲ್‌ ಪ್ರೇಮಿ..!

ಬಳ್ಳಾರಿ; ತನ್ನನ್ನು ಮದುವೆಯಾಗಲಿಲ್ಲವೆಂಬ ಜಿದ್ದಿನಲ್ಲಿದ್ದ ಪಾಗಲ್‌ ಪ್ರೇಮಿಯೊಬ್ಬ, ಮಾಜಿ ಪ್ರೇಯಸಿಯ ರುಂಡವನ್ನು ಕತ್ತರಿಸಿ ಪೊಲೀಸ್‌ ಠಾಣೆಗೆ ತಂದು ಶರಣಾಗಿರುವ ಗಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ. ಕೂಡ್ಲಿಗಿ ತಾಲ್ಲೂಕಿನ ಕನ್ನಬೋರಯ್ಯನ ಹಟ್ಟಿ ಗ್ರಾಮದ ನಿರ್ಮಲಾ ಕೊಲೆಯಾದ ಯುವತಿ.

ಬಿಎಸ್‌ಸಿ ನರ್ಸಿಂಗ್‌ ಓದುತ್ತಿದ್ದ ನಿರ್ಮಲಾಳನ್ನು ತನಗೆ ಕೊಟ್ಟು ಮದುವೆ ಮಾಡುವಂತೆ ಅದೇ ಗ್ರಾಮದ ಯುವಕ ಭೊಜರಾಜು ಪಟ್ಟು ಹಿಡಿದಿದ್ದ. ಆದ್ರೆ, ನಿರ್ಮಲಾ ಮನೆಯವರು ಇದಕ್ಕೆ ಒಪ್ಪಿರಲಿಲ್ಲ. ಹೀಗಾಗಿ ಭೋಜರಾಜು ಬೇರೊಂದು ಯುವತಿ ಜೊತೆ ಮದುವೆಯಾಗಿದ್ದ. ಎಲ್ಲವೂ ತಣ್ಣಗಾಯಿತು ಎಂದೇ ಗ್ರಾಮಸ್ಥರು ಭಾವಿಸಿದ್ದರು. ಆದ್ರೆ, ಪರೀಕ್ಷೆ ಇದ್ದುದರಿಂದಾಗಿ ಓದಿಕೊಳ್ಳಲೆಂದು ನಿರ್ಮಲಾ ಇತ್ತೀಚೆಗೆ ಊರಿಗೆ ಬಂದಿದ್ದಳು. ಈ ವಿಷಯ ತಿಳಿದ ಭೋಜರಾಜು ಮಚ್ಚಿನಿಂದ ಆಕೆಯ ತಲೆ ಕಡಿದು, ಅದನ್ನು ಖಾನಾಹೊಸಹಳ್ಳಿ ಪೊಲೀಸ್‌ ಠಾಣೆಗೆ ತಂದಿದ್ದಾನೆ.

 

Share Post