CrimeDistricts

ಗಾಂಜಾ ಹೊಂದಿದ್ದ ಆರೋಪ; 12 ವಿದ್ಯಾರ್ಥಿಗಳು ಅರೆಸ್ಟ್‌

ಮಂಗಳೂರು; ಗಾಂಜಾ ಇಟ್ಟುಕೊಂಡಿದ್ದ ಆರೋಪದ ಮೇಲೆ 12 ವಿದ್ಯಾರ್ಥಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವಿದ್ಯಾರ್ಥಿಗಳೆಲ್ಲರೂ ಕೇರಳ ಮೂಲದವರು ಎಂದು ತಿಳಿದುಬಂದಿದೆ. ಇವರಿಗೆ ಗಾಂಜಾ ಹೇಗೆ ಬಂತು..?, ಯಾರು ಸಪ್ಲೈ ಮಾಡಿದರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ಮಂಗಳೂರು ನಗರದ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಹಾಗೂ ಈ ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಕೂಡಲೇ ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಪಿಎಸ್ಐ ಬಿ.ರಾಜೇಂದ್ರ ನೇತೃತ್ವದ ಪೊಲೀಸರ ತಂಡ ವೆಲೆನ್ಸಿಯಾ ಸೂಟರ್‌ಪೇಟೆ ಮೂರನೇ ಕ್ರಾಸ್ ಅಡ್ಡರಸ್ತೆ ಬಳಿಯ ವಸತಿಗೃಹವೊಂದಕ್ಕೆ ದಾಳಿ ನಡೆಸಿತ್ತು. ದಾಳಿಯ ವೇಳೆ 900 ಗ್ರಾಂ ತೂಕದ 20 ಸಾವಿರ ಮೌಲ್ಯದ ಗಾಂಜಾ, ಗಾಂಜಾ ಸೇದುವ ಕೊಳವೆ, ರೋಲಿಂಗ್ ಪೇಪರ್‌ಗಳು, 4,500 ನಗದು ಹಾಗೂ 11 ಮೊಬೈಲ್ ಫೋನ್‌ಗಳನ್ನು, ಡಿಜಿಟಲ್ ತಕ್ಕಡಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೇರಳದ ಕಣ್ಣೂರು ಜಿಲ್ಲೆಯ ಪಯಂಗಡಿ ಗ್ರಾಮದ ಶಾನೂಫ್ ಅಬ್ದುಲ್ ಗಫೂರ್(21), ತಾಯಿಲ್‌ನ ಮೊಹಮ್ಮದ್ ರಸೀನ್ (22), ಪಾಪಿನಾಶೇರಿ ಗ್ರಾಮದ ಅಮಲ್ (21) ಮತ್ತು ಅಭಿಷೇಕ (21), ಆರ್ಲಂ ಗ್ರಾಮದ ಪೆರಂಬಾಶಿಯ ನಿದಾಲ್ (21), ವಾಡಿಕ್ಕಲ್ ಗ್ರಾಮದ ಮಾಡಾವಿಯ ಮೊಹಮ್ಮದ್ ರಿಶಿನ್ (22), ಗುರುವಾಯೂರಿನ ತಮರಾಯೂರಿನ ಗೋಕುಲ ಕೃಷ್ಣನ್ (22), ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಪೊದಾವುರ್‌ನ ಶಾರೂನ್ ಆನಂದ (19), ಪಣತೂರ್ ಗ್ರಾಮದ ಅನಂತು ಕೆ.ಪಿ (18), ತ್ರಿಕರಿಪುರ ಗ್ರಾಮದ ಶಾಹೀದ್ ಎಂ.ಟಿ.ಪಿ (22), ಎರ್ನಾಕುಳಂ ಜಿಲ್ಲೆಯ ಕಲೂರ್ ಕೊಚ್ಚಿಯ ಫಹಾದ್ ಹಬೀಬ್ (22), ಕೋಯಿಕ್ಕೋಡ್‌ ಜಿಲ್ಲೆಯ ಕಕ್ಕಾಡ್ ಗ್ರಾಮದ ರಿಜಿನ್ ರಿಯಾಜ್‌ (22) ಬಂಧಿತರು.

Share Post