CrimeDistricts

ಚಂದ್ರಶೇಖರ ಗುರೂಜಿ ಹಂತಕರ ಕೊನೆಗೂ ಅರೆಸ್ಟ್‌..!

ಹುಬ್ಬಳ್ಳಿ; ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಕೊಲೆ ಆರೋಪಿಗಳನ್ನು ಘಟನೆ ನಡೆದ ನಾಲ್ಕು ಗಂಟೆಯಲ್ಲೇ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಚಂದ್ರಶೇಖರ ಗುರೂಜಿ ಅವರ ಶಿಷ್ಯರೇ ಆಗಿದ್ದಂತಹ ಮಹಾತೇಂಶ್‌ ಶಿರೋಳ್‌ ಹಾಗೂ ಮಂಜುನಾಥ್‌ ದುಮ್ಮವಾಡ ಬಂಧಿತ ಆರೋಪಿಗಳು. ಈ ಇಬ್ಬರೇ ಗುರೂಜಿಯನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಮಹಾಂತೇಶ್‌ ಶಿರೋಳ್‌ನ ಪತ್ನಿ ವನಜಾಕ್ಷಿಯನ್ನೂ ಬಂಧಿಸಲಾಗಿದೆ. ಬೇನಾಮಿ ಆಸ್ತಿ ವಿಚಾರಕ್ಕೆ ಜಗಳ ನಡೆದಿದ್ದು, ಇದೇ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಚಂದ್ರಶೇಖರ ಗುರೂಜಿಯವರ ಕಚೇರಿಯಲ್ಲೇ ಮಹಾಂತೇಶ್‌ ಶಿರೋಲ್‌ ಅವರ ಪತ್ನಿ ವನಜಾಕ್ಷಿ ಅವರು 2019 ರ ಕೆಲಸ ಮಾಡುತ್ತಿದ್ದಳು. ಈ ವೇಳೆ ಚಂದ್ರಶೇಖರ ಗುರೂಜಿಯವರು ಈಕೆ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿದ್ದರು ಎಂದು ಗೊತ್ತಾಗಿದೆ. ಈ ಆಸ್ತಿ ವಿಚಾರವಾಗಿ ಗುರೂಜಿ ಹಾಗೂ ಮಹಾಂತೇಶ್‌ ಕುಟುಂಬದ ನಡುವೆ ಜಗಳ ನಡೆಯುತ್ತಿತ್ತು. ಈ ಆಸ್ತಿ ವಿಚಾರಕ್ಕಾಗಿಯೇ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

Share Post