CrimeDistricts

ಬೇನಾಮಿ ಆಸ್ತಿಗಾಗಿ ಗುರೂಜಿ ಕೊಲೆ..?; ಆ ಮಹಿಳೆ ಯಾರು ಗೊತ್ತಾ..?

ಹುಬ್ಬಳ್ಳಿ; ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣ ಸಂಬಂಧ ಹುಬ್ಬಳ್ಳಿ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಗುರುತಿಸಲಾಗಿದೆ. ಚಂದ್ರಶೇಖರ ಗುರೂಜಿ ಅವರ ಶಿಷ್ಯರೇ ಆಗಿದ್ದಂತಹ ಮಹಾತೇಂಶ್‌ ಶಿರೋಳ್‌ ಹಾಗೂ ಮಂಜುನಾಥ್‌ ದುಮ್ಮವಾಡ ಆರೋಪಿಗಳು. ಈ ಇಬ್ಬರೇ ಗುರೂಜಿಯನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

 

ಚಂದ್ರಶೇಖರ ಗುರೂಜಿಯವರ ಕಚೇರಿಯಲ್ಲೇ ಮಹಾಂತೇಶ್‌ ಶಿರೋಲ್‌ ಅವರ ಪತ್ನಿ ವನಜಾಕ್ಷಿ ಅವರು 2019 ರ ಕೆಲಸ ಮಾಡುತ್ತಿದ್ದಳು. ಈ ವೇಳೆ ಚಂದ್ರಶೇಖರ ಗುರೂಜಿಯವರು ಈಕೆ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿದ್ದರು ಎಂದು ಗೊತ್ತಾಗಿದೆ. ಈ ಆಸ್ತಿ ವಿಚಾರವಾಗಿ ಗುರೂಜಿ ಹಾಗೂ ಮಹಾಂತೇಶ್‌ ಕುಟುಂಬದ ನಡುವೆ ಜಗಳ ನಡೆಯುತ್ತಿತ್ತು. ಈ ಆಸ್ತಿ ವಿಚಾರಕ್ಕಾಗಿಯೇ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಇಬ್ಬರೂ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ವನಜಾಕ್ಷಿ ಎಂಬಾಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

 

ಇಬ್ಬರೂ ಆರೋಪಿಗಳು ಕೂಡಾ ಚಂದ್ರಶೇಖರ ಗುರೂಜಿಯವರ ಬಳಿಯೇ ಈ ಹಿಂದೆ ಕೆಲಸ ಮಾಡಿದ್ದರು ಎಂದು ತಿಳಿದುಬಂದಿದೆ.

Share Post