CrimeDistricts

ವಾಸ್ತು ಕೇಳಿ ನಷ್ಟ ಆಗಿದ್ದಕ್ಕೆ ನಡೆದುಹೋಯ್ತಾ ಚಂದ್ರಶೇಖರ ಗುರೂಜಿ ಕೊಲೆ..?

ಹುಬ್ಬಳ್ಳಿ; ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯವರು ವಾಸ್ತು ಪರಿಹಾರಗಳನ್ನು ನೀಡುತ್ತಿದ್ದರು. ಇದಕ್ಕಾಗಿಯೇ ಇವರು ಖ್ಯಾತಿ ಹೊಂದಿದ್ದರು. ಇಂದು ಕೂಡಾ ಅವರು ಗ್ರಾಹಕರನ್ನು ಭೇಟಿ ಮಾಡುವುದಕ್ಕಾಗಿಯೇ ಹುಬ್ಬಳ್ಳಿಗೆ ಆಗಮಿಸಿದ್ದರು. ಉಣಕಲ್‌ ಕೆರೆಯ ಬಳಿಯ ಪ್ರೆಸಿಡೆಂಟ್‌ ಹೋಟೆಲ್‌ನಲ್ಲಿ ತಂಗಿದ್ದರು. ಬೆಳಗ್ಗೆಯೇ ಬಂದಿದ್ದ ಇಬ್ಬರು ವ್ಯಕ್ತಿಗಳು ಗುರೂಜಿಯನ್ನು ಭೇಟಿ ಮಾಡಬೇಕು ಎಂದು ಹೇಳಿದ್ದರು. ಅರ್ಧ ಗಂಟೆಗೂ ಹೆಚ್ಚು ಕಾಲ ಹೋಟೆಲ್‌ನ ರಿಸೆಪ್ಷನ್‌ನಲ್ಲಿ ಕುಳಿತಿದ್ದರು. ಹೀಗಾಗಿ ರಿಸೆಪ್ಷನ್‌ನಲ್ಲಿದ್ದರು ಕರೆ ಮಾಡಿ ಗುರೂಜಿಗೆ ಈ ವಿಚಾರ ತಿಳಿಸಿದ್ದರು. ಆಗ ರಿಸೆಪ್ಷನ್‌ಗೆ ಬಂದ ಗುರೂಜಿಯನ್ನು ಕೊಲೆ ಮಾಡಲಾಗಿದೆ.

 

ಇಬ್ಬರು ವ್ಯಕ್ತಿಗಳು ಅರವತ್ತಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ. ಗುರೂಜಿ ಸಾವನ್ನಪ್ಪಿದ್ದರೂ ಪದೇ ಪದೇ ಚುಚ್ಚಲಾಗಿದೆ. ಇಬ್ಬರೂ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮಾಹಿತಿ ಪ್ರಕಾರ ಆರೋಪಿಗಳಿಬ್ಬರೂ ಬಾಗಲಕೋಟೆ ಮೂಲದವರು ಎಂದು ಹೇಳಲಾಗುತ್ತಿದೆ. ಗುರೂಜಿಯಿಂದ ಸರಳ ವಾಸ್ತು ಮಾಡಿಸಿಕೊಂಡಿದ್ದ ಈ ಇಬ್ಬರು ಇತ್ತಷ್ಟು ನಷ್ಟ ಅನುಭವಿಸಿದ್ದರು. ಅದರಿಂದ ಖಿನ್ನತೆಗೊಳಗಾಗಿ ಗುರೂಜಿಯನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

 

Share Post