CrimeNational

2002ರ ಗುಜರಾತ್‌ ಗಲಭೆ ಪ್ರಕರಣ; ಪ್ರಧಾನಿ ಮೋದಿಗೆ ಸುಪ್ರೀಂನಿಂದಲೂ ಕ್ಲೀನ್‌ ಚಿಟ್‌

ನವದೆಹಲಿ; ಗುಜರಾತ್ ಗಲಭೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರರಿಗೆ ಗುಜರಾತ್‌ ಹೈಕೋರ್ಟ್‌ ನೀಡಿದ್ದ ಕ್ಲೀನ್ ಚಿಟ್ ನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.  ಇದರಿಂದಾಗಿ ಜಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಂಡಂತಾಗಿದೆ. ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ನೇತೃತ್ವದ ಪೀಠ, ಜಾಕಿಯಾ ಸಲ್ಲಿಸಿದ ಅರ್ಜಿಯನ್ನು ತಳ್ಳಿಹಾಕಿದ್ದಾರೆ.

2002ರ ಗಲಭೆಯ ಸಂದರ್ಭದಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ನರೇಂದ್ರ ಮೋದಿಯವರೊಂದಿಗೆ ವಿಶೇಷ ತನಿಖಾ ತಂಡದ (ಎಸ್‌ಐಟಿ) ಸುಮಾರು 64 ಸಿಬ್ಬಂದಿ ವಿರುದ್ಧ ಕೇಸ್‌ ದಾಖಲಾಗಿತ್ತು. ಎಲ್ಲರಿಗೂ ಹೈಕೋರ್ಟ್‌ ಕ್ಲೀನ್ ಚಿಟ್ ನೀಡಿತ್ತು. ಹೀಗಾಗಿ  ಕಾಂಗ್ರೆಸ್ ಮಾಜಿ ಸಂಸದ ಇಶಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಗುಜರಾತ್ ಗಲಭೆಯ ಭಾಗವಾಗಿ ಗುಲ್ಬರ್ಗಾ ಸೊಸೈಟಿ ಹಿಂಸಾಚಾರದಲ್ಲಿ ಕಾಂಗ್ರೆಸ್ ನಾಯಕ ಇಶಾನ್ ಜಾಫ್ರಿ ಹತರಾಗಿದ್ದರು. ಗುಲ್ಬರ್ಗ ಸೊಸೈಟಿ ಹಿಂಸಾಚಾರದಲ್ಲಿ ಜಾಫ್ರಿ ಸೇರಿ 69 ಮಂದಿ ಸಾವನ್ನಪ್ಪಿದ್ದರು.

Share Post