NationalPolitics

ಸ್ತ್ರೀಯರಿಗೆ ಅಪಮಾನ ಮಾಡುವವರ ಪತನ ನಿಶ್ಚಿತ; ಕಂಗನಾ ಹಳೇ ವಿಡಿಯೋ ವೈರಲ್‌

ಮುಂಬೈ; ಉದ್ಧವ್‌ ಠಾಕ್ರೆ ಸರ್ಕಾರ ಪತನವಾಗುತ್ತಿದೆ. ಈ ಸಂದರ್ಭದಲ್ಲಿ ನಟಿ ಕಂಗನಾ ಈ ಹಿಂದೆ ನೀಡಿದ್ದ ಹೇಳಿಕೆಯೊಂದು ವೈರಲ್‌ ಆಗುತ್ತಿದೆ. ಯಾರು ಸ್ತ್ರೀಯರಿಗೆ ಅಪಮಾನ ಮಾಡುತ್ತಾರೋ ಅವರ ಪತನ ನಿಶ್ಚಿತ. ಇದಕ್ಕೆ ಸಾಕ್ಷಿ ಸೀತೆಗೆ ಅವಮಾನ ಮಾಡಿದ ರಾವಣ, ದ್ರೌಪದಿಗೆ ಅವಮಾನ ಮಾಡಿದ ಕೌರವರು ನಾಶವಾದರು ಎಂದು ಕಂಗಾನಾ ಈ ಹಿಂದೆ ಹೇಳಿದ್ದರು. ಆಗ ಉದ್ಧವ್‌ ಠಾಕ್ರೆ ಅವರನ್ನು ಉದ್ದೇಶಿಸಿಯೇ ಕಂಗನಾ ಹೇಳಿದ್ದರು. ಈಗ ಉದ್ಧವ್‌ ಅಧಿಕಾರ ಕಳೆದುಕೊಳ್ಳುವ ಹಂತ ತಲುಪಿರುವುದರಿಂದ ಕಂಗನಾರ ಈ ಹೇಳಿಕೆ ಸಖತ್‌ ವೈರಲ್‌ ಆಗುತ್ತಿದೆ. 

ನಟ ಸುಶಾಂತ್ ಸಿಂಗ್ ಅನುಮಾನಾಸ್ಪದ ಸಾವಿನ ಪ್ರಕರಣ ಸಂಬಂಧ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಂಗನಾ ರಣಾವತ್ ಕಿಡಿಕಾರಿದ್ದರು. ಈ ತಿಕ್ಕಾಟ ಜೋರಾದ ಸಮಯದಲ್ಲೇ ಕಂಗನಾ ರಣಾವತ್ ಮನೆ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಬಿಎಂಸಿ ಮನೆಯನ್ನು ಕೆಡವಿತ್ತು. ಈ ವೇಳೆ ಕಂಗನಾ ಇಂತ ಹೇಳಿಕೆ ನೀಡಿದ್ದರು.

 

Share Post