Bengaluru

ಬೆಂಗಳೂರಿನಲ್ಲಿ ವೃದ್ಧನ ಕಗ್ಗೊಲೆ; ಶಾಸಕರ ಕಚೇರಿ ಬಳಿಯೇ ನಡೆಯಿತು ಕೃತ್ಯ..!

ಬೆಂಗಳೂರು; ಬೆಂಗಳೂರಿನ ಅಪಾರ್ಟ್‌ಮೆಂಟ್‌ ಒಂದರನ್ನು ಎಪ್ಪತ್ತೇಳು ವರ್ಷದ ವೃದ್ಧರೊಬ್ಬರು ಕೊಲೆ ಮಾಡಲಾಗಿದೆ. ಚಾಮರಾಜಪೇಟೆಯ ನಾಲ್ಕನೇ ಕ್ರಾಸ್‌ನಲ್ಲಿರುವ ಶಾಸಕರ ಕಚೇರಿ ಪಕ್ಕದಲ್ಲೇ ಇರುವ ಕಿಂಗ್ಸ್‌ ಎನ್‌ಕ್ಲೇವ್‌ ಎಂಬ ಅಪಾರ್ಟ್‌ಮೆಂಟ್‌ನಲ್ಲಿ ಈ ಕೃತ್ಯ ಎಸಗಲಾಗಿದೆ.

ದೀಪಂ ಎಲೆಕ್ಟ್ರಿಕಲ್ಸ್‌ ಮಾಲೀಕ ಜುಗ್ಗುರಾಜ್‌ ಜೈನ್‌ ಕೊಲೆಯಾದವರು. ಇವರು ನಾಲ್ಕು ವರ್ಷದಿಂದ ಇದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಇವರ ಕೈಕಾಲು ಕಟ್ಟಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ದೋಚಲಾಗಿದೆ. ಮನೆಯಲ್ಲೆಲ್ಲಾ ಕಾರದಪುಡಿ ಚೆಲ್ಲಲಾಗಿದ್ದು, ಸ್ಥಳಕ್ಕೆ ಶ್ವಾನದಳ ಹಾಗೂ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮನೆಗೆಲಸದ ಹುಡುಗನೇ ಈ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಬೆಳಗ್ಗೆ ಜುಗ್ಗರಾಜ್‌ ಅವರೇ ಅಂಗಡಿ ತೆಗೆಯುತ್ತಿದ್ದರು. ಆದ್ರೆ ಇಂದು ಬೆಳಗ್ಗೆ ಎಷ್ಟು ಹೊತ್ತಾದರೂ ಜುಗ್ಗರಾಜ್‌ ಬಾಗಿಲು ತೆಗೆಯಲು ಬರಲಿಲ್ಲ. ಹೀಗಾಗಿ ಅವರ ಮೊಮ್ಮಗ ಕೀ ತೆಗೆದುಕೊಂಡು ಬರಲು ಅಲ್ಲಿಗೆ ಹೋಗಿದ್ದಾನೆ. ಈ ವೇಳೆ ಜುಗ್ಗರಾಜ್‌ ಅವರ ಕೊಲೆಯಾಗಿರುವುದು ಗೊತ್ತಾಗಿದೆ. ಕೂಡಲೇ ಮೊಮ್ಮಗ ಪೊಲೀಸರಿಗೆ ದೂರು ನೀಡಿದ್ದಾರೆ.

Share Post