Bengaluru

ರಾಜ್ಯದಲ್ಲಿ ಶಾಲೆಗಳ ಆರಂಭ; ಶೀಘ್ರದಲ್ಲೇ ಪುಸ್ತಕ, ಸಮವಸ್ತ್ರ – ಸಿಎಂ

ಬೆಂಗಳೂರು; ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಶೀಘ್ರದಲ್ಲೇ ಪಠ್ಯಪುಸ್ತಕಗಳು, ಸಮವಸ್ತ್ರ ಹಾಗೂ ಸೈಕಲ್‌ಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಇಂದು ಬೆಳಗ್ಗೆ ತಮ್ಮ ಆರ್‌.ಟಿ.ನಗರದ ನಿವಾಸದಲ್ಲಿ ಮಾತನಾಡಿದ ಅವರು, ಶಾಲೆಗಳಲ್ಲಿ ಮಕ್ಕಳಿಗೆ ಒಳ್ಳೆಯ ವಾತಾವರಣ ನಿರ್ಮಿಸಿಕೊಡುವುದು ನಮ್ಮ ಕರ್ತವ್ಯ, ಅದನ್ನು ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ.

 ಇನ್ನು ಬಿಸಿಯೂಟ ವ್ಯವಸ್ಥೆಯೂ ಮಾಡುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.  ಕೋವಿಡ್ ಕಾರಣಕ್ಕೆ ಇಷ್ಟು ದಿನ ಕ್ಷೀರಭಾಗ್ಯ ಮತ್ತು ಮಧ್ಯಾಹ್ನದ ಬಿಸಿ ಊಟಕ್ಕೆ ಶಾಲೆಯಲ್ಲಿ ಕಡಿವಾಣ ಹಾಕಲಾಗಿತ್ತು. ಅದರ ಬದಲಾಗಿ ದವಸ, ಧಾನ್ಯಗಳನ್ನು ಮಕ್ಕಳ ಕುಟುಂಬಗಳಿವೆ ವಿತರಣೆ ಮಾಡಲಾಗುತ್ತಿತ್ತು. ‌ಆದರೆ, ಇಂದಿನಿಂದ ಬಿಸಿಯೂಟವನ್ನು ಆರಂಭಿಸಲು ತಿಳಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಇದೇ ವೇಳೆ ತಿಳಿಸಿದ್ದಾರೆ.

 

Share Post