Districts

ಹಸು ಮೈತೊಳೆಯುವಾಗ ದುರ್ಘಟನೆ; ಕಾಲು ಜಾರಿ ಬಿದ್ದು ತಾತ ಮೊಮ್ಮಗ ಸಾವು

ತುಮಕೂರು: ಹಸು ಮೈತೊಳೆಯುವಾಗ ಕೆರೆಯಲ್ಲಿ ಕಾಲು ಜಾರಿಬಿದ್ದು ತಾತ, ಮೊಮ್ಮಗ ದಾರುಣ ಸಾವನ್ನಪ್ಪಿರುವ ಘಟನೆ ತಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಕುಂಟೆಗೌಡನಹಳ್ಳಿಯಲ್ಲಿ ನಡೆದಿದೆ.

ಕುಂಟೆಗೌಡನಹಳ್ಳಿ ಗ್ರಾಮದ ಕರಿಯಣ್ಣ (60) ಹಾಗೂ ಮೊಮ್ಮಗ ದಿಲೀಪ್ (12) ಕೆರೆಯಲ್ಲಿ ಕಾಲು ಜಾರಿಬಿದ್ದು ಸಾವನ್ನಪ್ಪಿದವರು. ಹಸುಗಳಿಗೆ ಕಟ್ಟೆಯಲ್ಲಿ ಮೈ ತೊಳೆಯುತ್ತಿದ್ದ ವೇಳೆ ಮೊಮ್ಮಗ ದಿಲೀಪ್ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾನೆ. ಮೊಮ್ಮಗನನ್ನು ಕಾಪಾಡಲು ತಾತ ಕರಿಯಣ್ಣ ಸಹ ನೀರಿಗೆ ದುಮುಕಿದ್ದಾರೆ. ಇಬ್ಬರೂ ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Share Post